ಆಧಾರ್ ಕೇಂದ್ರ ತೆರೆಯಲು ತಹಶೀಲ್ದಾರ್ ಮನವಿ

ಹಾನಗಲ್ಲ:

       ಆಧಾರ ಕಾರ್ಡ್ ತಿದ್ದುಪಡಿ, ಹೊಸದಾಗಿ ಕಾರ್ಡ್ ಮಾಡಿಸುವ ಅನುಕೂಲಕ್ಕಾಗಿ ಆಧಾರ ಕಾರ್ಡ್ ತಿದ್ದುಪಡಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಲೋಕ್‍ಮಂಚ್ ಮುಖಂಡರು ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.

       ಈಗ ಎಲ್ಲ ಪ್ರಕ್ರಿಯೆಗಳಿಗೆ ಆಧಾರ ಕಾರ್ಡ್ ಕಡ್ಡಾಯವಾಗುತ್ತಿದೆ. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಆಧಾರ ಕಾರ್ಡ್‍ಗಳಲ್ಲಿ ತಿದ್ದುಪಡಿ, ಪೋನ್ ನಂಬರ್ ದಾಖಲಿಸುವುದು ಮತ್ತಿತರ ಸಮಸ್ಯೆಗಳು ಏರ್ಪಡುತ್ತಿವೆ. ಹೀಗಾಗಿ ತಾಲೂಕಿನ ಹೊಬಳಿ ಮಟ್ಟದಲ್ಲಿ ಮತ್ತು ತಾಲೂಕು ಕೇಂದ್ರದಲ್ಲಿ ಆಧಾರ ಕಾರ್ಡ್ ಮಾಡುವ, ತಿದ್ದುಪಡಿ ಮಾಡಿಕೊಡುವ ಕೇಂದ್ರಗಳನ್ನು ತೆರಯುವ ಮೂಲಕ ಜನರಿಗೆ ಸಹಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ವಿವರಿಸಲಾಗಿದೆ.

      ವಿವಿಧ ಗ್ರಾಮಗಳ ಲೋಕ್‍ಮಂಚ್ ಮುಖಂಡರಾದ ಮಂಜುನಾಥ ಕುದರಿ, ಟಿ.ಎಚ್.ಕೊಪ್ಪದ, ಶೇಖಪ್ಪ ಮುರಗೋಡ, ಬಸಣ್ಣ ಕೊತಂಬರಿ, ನೀಲಮ್ಮ ಕಟ್ಟಿಮನಿ, ರಾಮಚಂದ್ರ ಶಿಡ್ಲಾಪೂರ, ಶೇಖಣ್ಣ ಅಡಿವೇರ, ಕಲೀಲ್ ಮಾಸನಕಟ್ಟಿ, ಮಂಗಳಾ ಬೆಣ್ಣಿ, ಚಂದ್ರಪ್ಪ ಅಪ್ಪಗೊಂಡ್ರ ಮತ್ತಿತರರು ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap