ಪಾವಗಡ
ಪಳವಳ್ಳಿ ಗ್ರಾಮದ ಪಲ್ಲವರಾಯ ಕೆರೆಯ ಮಣ್ಣನ್ನು ಕೆಲ ಗುತ್ತಿಗೆದಾರರು ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ವರದರಾಜುಗೆ ಮನವಿ ಪತ್ರ ಸಲ್ಲಿಸಿದ ಘಟನೆ ಜರುಗಿದೆ.
ಮನವಿ ಸಲ್ಲಿಸಿ ರೈತ ಮುಖಂಡ ರೈತ ಮುಖಂಡ ಶ್ರೀನಿವಾಸ್ ಮಾತನಾಡಿ, ಅಕ್ರಮವಾಗಿ ಕೆರೆಯ ಮಣ್ಣನ್ನು ಸಾಗಿಸುತ್ತಿರುವುದರಿಂದ ಪರಿಸರಕ್ಕೆ ದಕ್ಕೆಯುಂಟಾಗುತ್ತಿದೆ. ಅಂತರ್ಜಲಮಟ್ಟ ಕುಸಿಯುತ್ತ್ತಿದೆ. ಪ್ರಾಣಿ ಪಕ್ಷಿಗಳಿಗೆ ತೊಂದರೆಯುಂಟಾಗುತ್ತ್ತಿದೆ.
ತಾಲ್ಲೂಕಿನಲ್ಲಿ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಪಲ್ಲವರಾಯ ಕೆರೆಯನ್ನು ಹಾಳು ಮಾಡುತ್ತಿದ್ದು, ಈ ತಕ್ಷಣ ಸ್ಥಳ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.ಮುಖಂಡ ಕೆಂಚಗಾನಹಳ್ಳಿ ಗಂಗಾಧರ್ ಮಾತನಾಡಿ, ಪಳವಳ್ಳಿಯ ಕೆರೆಯ ಮಣ್ಣನ್ನು ವಿವಿಧ ಕಾಮಗಾರಿಗಳಿಗಾಗಿ ಕೆಲ ಗುತ್ತಿಗೆದಾರರು ಅಕ್ರಮವಾಗಿ ಸಾಗಿಸುತ್ತಿರುವುದು ಸರಿಯಲ್ಲ.
ಇದರ ಬಗ್ಗೆ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆಯದೆ ಯಾವುದೆ ರಾಜಧನ ಪಾವತಿಸಿದೆ ಮಣ್ಣನ್ನು ಜೆ.ಸಿ.ಬಿ. ಯಂತ್ರಗಳ ಸಹಾಯದಿಂದ ಸಾಗಿಸುತ್ತಿದ್ದರೂ, ತಾಲ್ಲೂಕು ಆಡಳಿತ ನಿದ್ದೆ ಮಾಡುತ್ತಿದೆ ಎಂದು ದೂರಿದರು.ಮನವಿ ಸ್ವೀಕರಿಸಿ ಮಾತನಾಡಿದ ವರದರಾಜು, ಸಂಬಂಧÀಪಟ್ಟವರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.ರೈತ ಸಂಘದ ಪಧಾಧಿಕಾರಿಗಳಾದ ನಟರಾಜು, ಸುಮನ್, ರಾಮಾಂಜಿನಪ್ಪ ಮತ್ತಿತರರಿದ್ದರು.
