ಉತ್ತರ ಪಿನಾಕಿನಿ ನದಿಗೆ ನೀರು ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ

ಪಾವಗಡ

     ಉತ್ತರ ಪಿನಾಕಿನಿ ನದಿಗೆ ಆಂಧ್ರದ ಹಂದ್ರೀನೀವಾ ನೀರು ಯೋಜನೆ ಮೂಲಕ ನೀರು ಹರಿಸುವ ಕುರಿತು ಇಂದು ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಯೂರಪ್ಪ ಅವರ ಬಳಿ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಮತ್ತು ನೆರೆಯ ಅಂಧ್ರದ ಅನಂತಪುರ ಜಿಲ್ಲೆಯ ರ್ಯಾಪ್ತಾಡು ಶಾಸಕ ಪ್ರಕಾಶ ರೆಡ್ಡಿ ಪುಟ್ಟಪರ್ತಿ ಶಾಸಕ ದುದ್ದಕುಂಟ ಶ್ರೀಧರ ರೆಡ್ಡಿ ಅವರು ಸುದೀಘ ಚರ್ಚೆ ನಡೆಸಿದ್ದಾರೆ.

   ನೀರನ್ನು ಉತ್ತರ ಪಿನಾಕಿನಿ ನದಿಗೆ ಹರಿಸಿ ಆಂಧ್ರಾದ ಪೆರೋರು ಗ್ರಾಮದಲ್ಲಿ ನಿರ್ಮಿಸಿರುವ ಒಂದು ಟಿಎಂಸಿ ನೀರು ತುಂಬುವಷ್ಟು ಇರುವ ಡ್ಯಾಂ ತುಂಬಿಸಲು ಸುಲಭ ಮಾರ್ಗ ಇದಾಗಿ ಎಂದು ನದಿ ಮೂಲಕ ಹರಿಸಲು ಅಂಧ್ರದ ಇಬ್ಬರು ಶಾಸಕರು ಮುಖ್ಯ ಮಂತ್ರಿಗಳ ಬಳಿ ಪ್ರಸ್ಥಾಪಿಸಿದರೆಂದು ತಿಳಿದಿದೆ

   ಈ ರೀತಿ ನೀರು ಹರಿಸಿದರೆ ನದಿಯ ಇಕ್ಕೆಲಗಳ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂಬುದನ್ನು ಮುಖ್ಯಮಂತ್ರಿಗಳಿಗೆ  ಮಾಡಿಕೊಟ್ಟಿದ್ದಾರೆ . ಮತ್ತು ನಾಗಲಮಡಿಕೆ ಬಳಿ ಕಟ್ಟಲಾಗಿರುವ ಬ್ಯಾರೇಜ್‍ಗೆ ನೀರು ತುಂಬಿಸಿಕೊಂಡರೆ ಪಾವಗಡ ನಗರಕ್ಕೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಬಳಿ ವಿನಂತಿಸಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link