ಎಸ್ ಎಂ ಕೃಷ್ಣಾ ಅವರಿಂದ ಪಕ್ಷದ್ರೊಹ : ಎಂ.ಅಂಜಿನಪ್ಪ

ಚಿಕ್ಕಬಳ್ಳಾಪುರ:

     ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ಮುಖಂಡ  ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್‍ ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಪಕ್ಷಾಂತರ ಮಾಡಿ ಪಕ್ಷಕ್ಕೆ  ದ್ರೋಹ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‍ನ ಅಪಾರಜಿತ ಅಭ್ಯರ್ಥಿ ಎಂ.ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಈ ಹಿಂದೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಶಾಸಕ ಸುಧಾಕರ್ ಅವರಿಗೆ ಎಸ್.ಎಂ.ಕೃಷ್ಣ ಮೊದಲ ಬಾರಿ ಕಾಂಗ್ರಸ್ ನಿಂದ ಬಿ ಫಾರ್ಮ್ ಕೊಡಿಸಿದ್ದರು. ಅಂದು ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಒಂದು ವೇಳೆ ಟಿಕೆಟ್ ಸಿಕ್ಕಿದ್ರೆ ನಾನು ಗೆಲ್ಲುತ್ತಿದ್ದೆ. ಆದರೆ ಅಂದು ಎಸ್.ಎಂ.ಕೃಷ್ಣ ಅವರು ನನಗೆ ಟಿಕೆಟ್ ಕೊಡದೆ ಸುಧಾಕರ್ ಅವರಿಗೆ ಟಿಕೆಟ್ ಕೊಡಿಸಿ ನನಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.

    ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಕಾರ ಹಾಗೂ ಹಣ ಬಲದಿಂದ ಗೆದ್ದಿದೆ.ನಾವು ಇನ್ನುಮುಂದೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಇಂತಹ ಕ್ಲಿಷ್ಠಕರ ಪರಿಸ್ಥಿತಿಯಲ್ಲಿಯೂ ನನಗೆ 50 ಸಾವಿರ ಮತಗಳು ಬಂದಿರುವುದು ಹೆಮ್ಮೆ ಅನಿಸುತ್ತದೆ. ನಾವು ಉಪ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿರಲಿಲ್ಲ.ಯಾವುದೇ ಅಕ್ರಮಗಳಲ್ಲಿ ತೊಡಗದೆ ಇಷ್ಟು ಪ್ರಮಾಣದಲ್ಲಿ ಮತ ಬಂದಿರುವುದು ನಮ್ಮ ಪಕ್ಷದ ಮೇಲೆ ಜನ ಇಟ್ಟಿರುವ ನಂಬಿಕೆ ನಾವು ಎಂದಿಗೂ ಚಿರಋಣಿಗಳಾಗಿರುತ್ತೇವೆ ಎಂದು ತಿಳಿಸಿದರು. 

Recent Articles

spot_img

Related Stories

Share via
Copy link
Powered by Social Snap