ಶಿಗ್ಗಾವಿ :
ಶರಣರನ್ನ ಹಾಗೂ ದಾರ್ಶನಿಕರನ್ನ ಒಂದೇ ಸಮಾಜಕ್ಕೆ ಸೀಮಿತಗೊಳಿಸದೇ ಅವರ ತತ್ವ ಪಾಲನೆಯನ್ನು ತಿಳಿದು ಅವರ ಜಯಂತಿಯನ್ನು ಸ್ವಾಭಿಮಾನದಿಂದ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಭೆಕು ಎಂದು ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ನಡೆದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣವರು ಬಸವ ತತ್ವದ ಪರಿಪಾಲಕರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು, ದೊಡ್ಡ ಮೆದಾವಿಗಳು ಅಪ್ಪಣ್ಣನವರು, ಜಾತಿಯತೆಯಂತಹ ಅನಿಷ್ಟ ಪದ್ದತ್ತಿಗಳನ್ನು ತೊಳೆಯಲು ಶ್ರಮಿಸಿದವರು.
ಈ ಸಮಾಜ ನಿಷ್ಟೆಯ ಸಮಾಜವಾಗಿದೆ ಆದ್ದರಿಂದಲೆ ಎಲ್ಲ ಸಮಾಜದರನ್ನು ಕರೆದು ಸಭೆ ಮಾಡಿರುವದು ಅನುಭವ ಮಂಟಪವನ್ನು ನೊಡಿದಂತಾಗುತ್ತದೆ ಹಡಪದ ಸಮಾಜದವರು ಜಿಲ್ಲೆಯಲ್ಲಿ ಕ್ರಾಂತಿಯನ್ನೆ ಮಾಡುತ್ತಿದ್ದಾರೆ ಎಂದರು.ತಹಶೀಲ್ದಾರ ಚಂದ್ರಶೇಖರ ಗಾಳಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ಶರಣರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ ಕೇವಲ ಅವರ ಜಯಂತಿ ಆಚರಣೆಯನ್ನು ಮಾಡಿ ಬಿಡದೆ ಅವರ ತತ್ವ ಸಿದ್ದಾಂತಗಳನ್ನ ಮೈಗೂಡಿಸಿಕೊಳ್ಳುವ ಕಡೆ ಇಂದಿನ ಸಮಾಜಗಳು ಮುಂದಾಗಬೇಕು, ಹಡಪದ ಸಮಾಜವರು ತೀರ್ಮಾನಿಸಿದಂತೆ ಅವರಿಗೆ ಸರ್ಕಾರದ ನಿಯಮಾನುಸಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದರ ಜೊತೆಗೆ ಜಯಂತಿಯನ್ನು ವಿಜೃಂಬಣೆಯಿಂದ ಆಚರಿಸಲು ಸಹಕರಿಸಲಾಗುವುದು ಜೊತೆ ಇಂದು ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದರು.
ಹಡಪದ ಸಮಾಜದ ತಾಲೂಕಾ ಅಧ್ಯಕ್ಷ ಬಸವರಾಜ ಹಡಪದ ಮಾತನಾಡಿ ಜಯಂತಿ ಕೇವಲ 2-3 ದಿನ ಇರುವ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆದಿರುವದು ಬೇಸರ ಸಂಗತಿಯಾಗಿದೆ, ಆದರೂ ತಹಶೀಲ್ದಾರರು ನಮಗೆ ಉತ್ತಮ ಸಹಕಾರ ನೀಡುತ್ತಿರುವದು ಸಂತಸ ತಂದಿದೆ ಎಂದರು.
ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಬಾಗೂರ, ಭಾಜಪ ಮುಖಂಡ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಪರಶುರಾಮ ಸೋನ್ನದ, ನ್ಯಾಯವಾದ ಬಸವರಾಜ ಜಕ್ಕನಕಟ್ಟಿ ಮಾತನಾಡಿದರು.ಗೌರವಾದ್ಯಕ್ಷ ಶಂಕ್ರಪ್ಪ ಮಡ್ಲಿಕರ, ಅಶೋಕ ಕಾಳೆ, ಶಶಿಧರ ಹೊನ್ನಣ್ಣವರ, ದುರಗಪ್ಪ ವಡ್ಡರ, ಸುರೇಶ ಹರಿಜನ, ಸಮಾಜದ ಹಿರಿಯರಾದ ಈರಪ್ಪ ಹಡಪದ, ಬಸವಣ್ಣೆಪ್ಪ ಹಡಪದ, ಮುತ್ತುರಾಜ ಹಡಪದ, ಬಸವರಾಜ ಕಟ್ಟಿಮನಿ, ಮುತ್ತುರಾಜ ಕ್ಷೌರದ, ಮಲ್ಲಿಕಾರ್ಜುನ ಹಡಪದ, ಶಿವರಾಜ ಕ್ಷೌರದ, ಶಿವಕುಮಾರ ಮಡ್ಲಿಕರ, ಮಾಲತೇಶ ಹಡಪದ, ತಿರಕಪ್ಪ ಹಡಪದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಡಪದ ಸಮಾಜದ ಬಾಂಧವರು, ಕಛೇರಿಯ ಸಿಬ್ಬಂದಿ ಇದ್ದರು, ಶಿರಸ್ಥದಾರ ರವಿ ಕೊರವರ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
