ಎಂಡಿ ನೇಮಕ ವಿಚಾರ : ಸಿ ಎಸ್ ಗೆ ಶಾಲಿನಿ ರಜನೀಶ್ ಪತ್ರ

ತುಮಕೂರು
    ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಯಾಮವಳಿಗಳನ್ನು ಗಾಳಿಗೆ ತೂರಿ ಎನ್.ಆರ್.ಆದರ್ಶ್ ಕುಮಾರ್ ಅವರನ್ನು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ್ದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿಯನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರೂ ಆಗಿರುವ ಸರ್ಕಾರದ ಯೋಜನೆ ಕಾರ್ಯಕ್ರಮ ಸಂಯೋಜನೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ವರ್ಗಾವಣೆ ಆದೇಶ ಮಾರ್ಪಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
     ಡಾ.ಶಾಲಿನಿ ರಜನೀಶ್ ಅವರು, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಬರೆದಿರುವ ಪತ್ರದ ಪ್ರತಿ ಪ್ರಜಾಪ್ರಗತಿಗೆ ಲಭ್ಯವಾಗಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
 
    ಶ್ರೀ ಎನ್.ಆರ್.ಆದರ್ಶ್ ಕುಮಾರ್, ಅಪರ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತುಮಕೂರು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ ತುಮಕೂರಿಗೆ ನಿಯೋಜಿಸಿರುವುದು ಸರಿಯಷ್ಟೇ..! ಆದರೆ ಕಂಪನಿಯ ಸಂಘದ ಅನುಮೋದಿತ ಲೇಖನಗಳ ಪ್ರಕಾರ ರಾಜ್ಯ ಸರ್ಕಾರವು ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕಾದರೆ ಐಎಎಸ್, ಕೆಎಎಸ್, ಕೆಎಂಎಎಸ್ ವೃಂದದ ಅಧಿಕಾರಿಗಳಾಗಿರಬೇಕು. ಎನ್.ಆರ್.ಆದರ್ಶ್ ಕುಮಾರ್ ಈ ವೃಂದಕ್ಕೆ ಸೇರಿದವರಲ್ಲ. ಆದುದರಿಂದ ಇವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಲು ಸೂಕ್ತ ಆದೇಶ ಹೊರಡಿಸುವಂತೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. 
ಸ್ವಾಗತ ಕೋರಿದ ಕೃಷಿಕ ಸಮಾಜ
   ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯರ್ಶಿಗಳು ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾದ ಡಾ|| ಶಾಲಿನಿ ರಜನೀಶ್ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ. ವಿಜಯ ಭಾಸ್ಕರ್‍ರವರಿಗೆ ಎನ್.ಆರ್.ಆದೇಶ್ ಕುಮಾರ್ ಅವರ ವರ್ಗಾವಣೆ ಆದೇಶ ಮಾರ್ಪಡಿಸಲು ಸೂಕ್ತ ಆದೇಶ ನೀಡುವಂತೆ ಕೋರಿ ಪತ್ರ ಬರೆದಿರುವುದನ್ನು ಜಿಲ್ಲಾ ಭಾರತೀಯ ಕೃಷಿಕ ಸಮಾಜ ಸ್ವಾಗತಾರ್ಹ ಅಭಿನಂದನೆ ಸಲ್ಲಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link