ಹೊಸಪೇಟೆ:
ಪದಾನಿ ನರೇಂದ್ರ ಮೋದಿಯವರು ಕೋಮುವಾದಿ ಎಂದು ಬಿಂಬಿಸುತ್ತಿರುವ ಕಾಂಗ್ರಸ್ ನಿಜವಾದ ಕೋಮುವಾದಿ ಪಕ್ಷ. ಎಚ್.ಡಿ.ದೇವೆಗೌಡರು, ಮೊದಲನೇ ಜಾತಿವಾದಿ, ಎರಡನೇ ಜಾತಿವಾದಿ ಸಿದ್ಧರಾಮಯ್ಯ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ-ಜಾತಿ-ಭಾಷೆಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಲಿಂಗಾಯತ-ವೀರಶೈವರನ್ನು ಪ್ರತೇಕ ಮೀಸಲಾತಿ ಹೆಸರಿನಲ್ಲಿ ಕಾಂಗ್ರೆಸ್ ಧರ್ಮ,ಜಾತಿಯಲ್ಲಿ ಕಲಹ ಸೃಷ್ಠಿಸಿತು. ರಾಜ್ಯದಲ್ಲಿ 21 ಜನ ಹಿಂದೂ ದೇಶಭಕ್ತರನ್ನು ಕೊಲೆ ಗೈದಾಗ ಕಾಂಗ್ರೆಸ್ ಓಟುಬ್ಯಾಂಕಿಗಾಗಿ ದೇಶದ್ರೋಹಿಗಳನ್ನು ರಕ್ಷಣೆ ಮಾಡಿತು ಎಂದು ಹರಿಹಾಯ್ದರು.
ಸಿನಿಮಾಗಳಲ್ಲಿ ಗೂಂಡಾಗಳಿದಂತೆ, ರಾಜಕೀಯದಲ್ಲಿ ಸಿದ್ಧರಾಮಯ್ಯ ಗೂಂಡಾ ಎಂದ ಅವರು, ರಾಜ್ಯದಲ್ಲಿ 6 ವರ್ಷದ ಬಾಲಕಿ ಮೇಲಿನ ಅತ್ಯಚಾರದ ಸದಸನದಲ್ಲಿ ಪ್ರಶ್ನೆ ಮಾಡಿದರೆ, ಸೊಕ್ಕಿನಿಂದ ಉತ್ತರ ನೀಡಿದ್ದ ಸಿದ್ಧರಾಮಯನವರು ತಮ್ಮ ಸೊಕ್ಕಿನಿಂದಲೇ ಅಧಿಕಾರ ಕಳೆದುಕೊಂಡರು. ಆದರೆ, ಪ್ರದಾನಿ ಮೋದಿಯರು, ಮೊದಲ ಬಾರಿಗೆ ಅತ್ಯಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವ ಮೂಲಕ ಹೆಣ್ಣು-ಮಕ್ಕಳ ಮಾನ-ಪ್ರಾಣದ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಶ್ರೀರಾಮುಲುಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ.ಅವರಿಗೇನಿದ್ದರೂ 420 ಗೊತ್ತು, 371 ಜೆ. ಗೊತ್ತಿಲ್ಲ. ಶಾಂತ ಆಂಧ್ರದ ಗುಂತಕಲ್ನವರು ಎಂದೇಳುವ ಸಿದ್ಧರಾಮಯ್ಯನವರಿಗೆ ಸೋನಿಯಾ ಗಾಂಧಿ ಇವರ ದೊಡ್ಡಪ್ಪನ ಮಗಳಾ ? ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ನವರ 420 ಕೆಲಸಕ್ಕೆ ಸೋಲು ಕಂಡರು. 371 ಜೆ ಅಡಿಯಲ್ಲಿ ಹೈದಾರಬಾದ್ ಕರ್ನಾಟಕದಲ್ಲಿ 5000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದು, ಭರ್ತಿಯಾಗಿರುವುದು ಕೇವಲ 6000 ಹುದ್ದೆಗಳು ಎಂದರು.
ಮಹಿಳೆಯರ ಬಗ್ಗೆ ಕಿಂಚತ್ತು ಗೌರವಿಲ್ಲದ ಸಿದ್ಧರಾಮಯ್ಯನವರು ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ನಿಗೆ ಹೆಣ್ಣುಮಕ್ಕಳ ಶಾಪ ತಟ್ಟಲಿದ್ದು, ಅವರ ಶಾಪದಿಂದಲೇ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಹರಿದಾಡುವುದು ಬೆವರು ಸುರಿಸಿ ಸಂಪಾದನೆ ಮಾಡಿದ ಹಣವಲ್ಲ. ಅದು ಡಿಕೆಶಿ ಕನಕಪುರದಲ್ಲಿ ಅಕ್ರಮ ಗ್ರಾನೇಟ್ನಲ್ಲಿ ಸಂಪಾದನೆ ಹಣ, ಕಾಂಗ್ರೆಸ್ನಿಂದ ನೋಟ್ ಪಡೆದು ಬಿಜೆಪಿ ಓಟು ನೀಡಿ ಎಂದರು.
ಚುನಾವಣೆ ಖರ್ಚಿಗಾಗಿ ನೀಡಿದ ಹಣವನ್ನು ಕಾಂಗ್ರೆಸ್ನವರು, ಖರ್ಚು ಮಾಡದೇ ಜೇಬಿಗೆ ಇಳಿಸುತ್ತಾರೆ. ಏನೆ ಆಗಲಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ನೋಟ್ ಪಡೆದು, ಬಿಜೆಪಿ ಓಟು ಕೊಡಿ ಎಂದು ಮನವಿ ಮಾಡಿದರು.
ಯಲಬುರ್ಗಾ ಶಾಸಕ ಹಾಲಪ್ಪಾಚಾರ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಮುಖಂಡರಾದ ರಾಮಲಿಂಗಪ್ಪ, ಅನಂತಪದ್ಮನಾಭ, ಜೋಗದ ನೀಲಮ್ಮ ಪಂಚಪ್ಪ, ಶಶಿಲ್ ನಮೋಶಿ, ಕಿಶೋರ್ ಪತ್ತಿಕೊಂಡ, ಕವಿರಾಜ್ ಅರಸ್, ಚಂದ್ರಕಾಂತ್ ಕಾಮಂತ್, ಶಂಕರ ಮೇಟಿ, ಗುಂಡಿ ರಾಘವೇಂದ್ರ, ಅನ್ನದಾನರೆಡ್ಡಿ, ಬಾಣದ ಸಂತೋಷ್ ಹಾಗೂ ಗುಜ್ಜಲ ರಾಮಾಂಜಿನಿ ಸೇರಿ ನೂರಾರು ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
