ಸಿದ್ದೇಶ್ವರ್ ಪರ ಅವರ ಪತ್ನಿಯಿಂದ ಪ್ರಚಾರ

ಹರಪನಹಳ್ಳಿ:

         ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರ ಅವರ ಪತ್ನಿ ಜಿ.ಎಂ.ಗಾಯಿತ್ರಿ ಅವರು ಪಟ್ಟಣದ ವಿವಿಧ ಬಡವಾಣೆಗಳಲ್ಲಿ ಸೋಮವಾರ ಮತಯಾಚನೆ ಮಾಡಿದರು.

         ಈ ವೇಳೆ ಮಾತನಾಡಿದ ಜಿ.ಎಂ.ಗಾಯಿತ್ರಿ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಐದು ವರ್ಷ, ಭ್ರಷ್ಟಚಾರ ರಹಿತ, ಜನಪರ ಆಡಳಿತ ನೀಡಿದೆ. ಇಡೀ ವಿಶ್ವವೇ ತಿರುಗಿ ನೋಡುವಂತ ಸಾಧನೆಯನ್ನು ಮೋದಿ ಸರ್ಕಾರ ಮಾಡಿದೆ. ದೇಶದ ರಕ್ಷಣೆ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗದುಕೊಂಡು ಜನರ ವಿಶ್ವಾಸಕ್ಕೆ ಕಾರಣವಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಶ್ರಮಿಸಿದ್ದಾರೆ. ಹೀಗಾಗಿ ಬಿಜೆಪಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಪಟ್ಟಣದಲ್ಲಿ ವಾಲ್ಮೀಕಿ ನಗರ, ಉಪ್ಪಾರಗೇರಿ, ಕುರುಬಗೇರಿ, ಛಲವಾದಿ ಕೆರಿ, ಚಿಕ್ಕೇರಿಗುಂಡಿ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

         ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅಶ್ವಿನ್ ಶ್ರೀನಿವಾಸ್, ಜಯಲಕ್ಷ್ಮೀ, ಲೀಲಕ್ಕ, ಐಶ್ವರ್ಯ, ವೀಣಾ ಲಿಂಗರಾಜ್, ಗಾಯಿತ್ರಿ ಸುಭಾಷ್, ರಾಯದುರ್ಗದ ಗಂಗಮ್ಮ, ರೇಖಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಮುಖಮಡರಾದ ಬಾಗಳಿ ಕೊಟ್ರೇಶಪ್ಪ, ಸಣ್ಣಹಾಲಪ್ಪ, ರಾಘವೇಂದ್ರ ಶೆಟ್ಟಿ, ಲಿಂಬ್ಯಾ ನಾಯ್ಕ, ಮಲ್ಲೇಶ್, ಮಲ್ಕಪ್ಪ ಅಧಿಕಾರ, ಕೆ.ಸತ್ಯನಾರಾಯಣ, ಕೆಂಚಪ್ಪ, ಯುಪಿ ನಾಗರಾಜ್, ಸಂತೋಷ್, ಎಂ.ಶ್ರೀಕಾಂತ, ಗುಂಡಿ ಮಂಜುನಾಥ, ತಿಮ್ಮಣ್ಣ, ಕೃಷ್ಣ, ಮ್ಯಾಕಿ ದುರುಗಪ್ಪ ಇದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap