ಗದಗ:
ಮಾಜಿ ಸಂಸದ ಹಾಗೂ ಮುಂಚೂಣಿ ಬಿಜೆಪಿ ಮುಂಖಂಡ ಶ್ರೀರಾಮುಲು ಅವರನ್ನು “420” ಎಂದು ಸಂಭೋಧಿಸುವ ಮೂಲಕ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸಿದ್ದರಾಮಯ್ಯ ಅವರ ಬಾಯಿಂದ ಇಂತಹ ಕೆಳಮಟ್ಟದ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ. ವ್ಯಕ್ತಿಗತವಾದ ತೇಜೋವಧೆ ಮತ್ತು ಒಂದು ಸಮಾಜದ ಬಗ್ಗೆ ಮಾತನಾಡುವುದು ತರವಲ್ಲ. ಶಾಸಕ ಶ್ರೀರಾಮುಲು ವಿರುದ್ಧ ಸಿದ್ದರಾಮಯ್ಯ “420” ಪದ ಬಳಕೆ ಮಾಡಿದ್ದು ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/pic.gif)