ಚುನಾವಣಾ ಅಧಿಕಾರಿಗಳಿಗೆ ಪತ್ರಕರ್ತರ ಸಂಘದಿಂದ ಅಭಿನಂದನೆ

ಹಿರಿಯೂರು :

       ತಾಲ್ಲೂಕಿನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಎಲ್ಲಾ ರೀತಿಯ ಕ್ರಮಕೈಗೊಂಡಿರವುದಾಗಿ ಮಾಧ್ಯಮ ಪ್ರತಿನಿಧಿಗಳ ಸುದ್ದಿಗೋಷ್ಟಿಯಲ್ಲಿ ಪ್ರಕಟಿಸಿದ, ಸಹಾಯಕ ಚುನಾವಣೆ ಅಧಿಕಾರಿ ಚನ್ನಬಸಪ್ಪಕೊಡ್ಲಿ ಹಾಗೂ ತಹಶೀಲ್ದಾರ್ ನಫೀಜಾಬೇಗಂ ರವರಿಗೆ ತಾಲ್ಲೂಕು ಪತ್ರಕರ್ತರಸಂಘದಿಂದ ಪುಷ್ಪಗುಚ್ಚಾ ನೀಡಿ ಅಭಿನಂದಿಸಲಾಯಿತು.

       ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆಲೂರುಹನುಮಂತರಾಯಪ್ಪ ಮಾತನಾಡಿ, ಈ ಬಾರಿಯ ಚುನಾವಣಾ ಕಾರ್ಯಕ್ಕೆ ಮಾಧ್ಯಮ ಪ್ರತಿನಿಧಿಗಳು ಹಾಗೂ ನಮ್ಮ ಪತ್ರಕರ್ತರ ಸಂಘದಿಂದ ಎಲ್ಲಾರೀತಿಯ ಬೆಂಬಲ ಹಾಗೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

         ಈ ಸಂದರ್ಭದಲ್ಲಿ ಪ್ರಜಾವಾಣಿ ಪ್ರತಿನಿಧಿ ಎನ್.ಎಲ್.ಬಸವರಾಜು, ವಿಜಯವಾಣಿ ಪ್ರತಿನಿಧಿ ಬಸವರಾಜ್ ಖಂಡೇನಹಳ್ಳಿ, ಸಂಜೆವಾಣಿ ಪ್ರತಿನಿಧಿ ರವಿಮಿರಜ್ಕರ್, ಸಮಗ್ರಸುದ್ದಿ ಪ್ರತಿನಿಧಿ ಚಿದಾನಂದ್, ಕನ್ನಡಸಂಪಿಗೆ ಪ್ರತಿನಿಧಿ ಪಿ.ಆರ್.ಸತೀಶಬಾಬು ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap