ಶಿರಾ
ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಯಂಜಲಗೆರೆ ಗ್ರಾಮದ ಡಾ.ಶ್ರೀಕಾಂತ್ರವರು ಐಎಎಸ್ ಪರೀಕ್ಷೆಯಲ್ಲಿ ದೇಶದಲ್ಲಿ 680ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ಬರದ ನಾಡಿನ ಗಡಿ ಭಾಗದ ಪ್ರಥಮ ಐಎಸ್ಎಸ್ ಉತ್ತೀರ್ಣನಾದ ಪ್ರತಿಭಾವಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ತಾಲ್ಲೂಕಿನ ಯಂಜಲಗೆರೆಯ ಧರ್ಮೇಶ್ ಹಾಗೂ ಶಿಕ್ಷಕಿ ಸುವರ್ಣಮ್ಮ ಅವರ ಪುತ್ರರಾದ ಶ್ರೀಕಾಂತ್ ಎಂ.ಬಿ.ಬಿ.ಎಸ್. ಹಾಗೂ ಎಂ.ಡಿ. ಪದವಿ ಪಡೆದಿದ್ದು ಚಿತ್ರದುರ್ಗದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ