ಸ್ಮಾರ್ಟ್ ಲಾಂಜ್ ಯೋಜನೆಗೆ ಸ್ಮಾರ್ಟ್ ಸಿಟಿ ಇಂಡಿಯಾ -2019 ಪ್ರಶಸ್ತಿ

ತುಮಕೂರು

   ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಗಿಕ ಯೋಜನೆಯಾದ ಸ್ಮಾರ್ಟ್ ಲಾಂಜ್ @ ಅಮಾನಿಕೆರೆ ಯೋಜನೆಗೆ ಶೈಕ್ಷಣಿಕ ಕಾರ್ಯಕ್ರಮ ವಿಭಾಗದಲ್ಲಿ ಸ್ಮಾರ್ಟ್ ಸಿಟಿ ಇಂಡಿಯಾ-2019 ಮೊದಲ ಪ್ರಶಸ್ತಿಯನ್ನು ಪಡೆದಿದೆ.

     ನವದೆಹಲಿಯಲ್ಲಿ ಮೇ 22 ರಿಂದ 24ರವರೆಗೆ ನಡೆದ 05ನೇ ಸ್ಮಾರ್ಟ್ ಸಿಟಿ ಎಕ್ಸ್‍ಪೋ 2019ನಲ್ಲಿ ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾಗಿರುವ 07 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಪ್ರಶಸ್ತಿಯನ್ನು ಪಡೆದಿರುವ ಏಕೈಕ ನಗರವಾಗಿದ್ದು, ಮೇ 24ರಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಟಿ.ರಂಗಸ್ವಾಮಿ ಹಾಗೂ ಮುಖ್ಯ ಅಭಿಯಂತರ ಡಾ|| ಹೆಚ್.ಆರ್.ಶಾಂತರಾಜಣ್ಣ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

    ಈ ಸಮಾರಂಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕು. ರಶ್ಮಿ.ಎಸ್.ಆರ್ ಹಾಗೂ ಕಿರಿಯ ನಗರ ಯೋಜಕರಾದ ಕು. ನೂಪುರ್ ನಂದಿನಿ ಇವರುಗಳು ಪಾಲ್ಗೊಂಡಿದ್ದರು.ಸ್ಮಾರ್ಟ್ ಲಾಂಜ್ ಒಂದು ನವೀನ ಯೋಜನೆಯಾಗಿದ್ದು, ನಾಗರೀಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೆಚ್ಚು ಉಪಯುಕ್ತ ಮಾಡುವ ಉದ್ದೇಶದಿಂದ ಸೃಜಿಸಲಾಗಿದೆ.

      ಸ್ಮಾರ್ಟ್ ಲಾಂಜ್‍ನ ಯೋಜನೆಯಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಕೈಗೆಟುಕುವ ಸೌಲಭ್ಯಗಳಾದ ಇ-ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಡಿಜಿಟಲ್ ಓದುವಿಕೆ, ಸಾರ್ವಜನಿಕರಿಗೆ ಡಿಜಿಟಲ್ ಸೇವೆಗಳು, ಕಿಯೋಸ್ಕ್, ಕೆಫೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇರುತ್ತದÉ. ಈ ಯೋಜನೆಯಲ್ಲಿ ಎಟಿಎಂ ಹಾಗೂ ಹೆಲ್ತ್ ಎಟಿಎಂ ಸೌಲಭ್ಯಗಳನ್ನು ಸಹ ಅಳವಡಿಸಲು ಉದ್ದೇಶಿಸಲಾಗಿದೆ. ಮೇಲ್ಕಂಡ ಎಲ್ಲಾ ಸೌಲಭ್ಯವನ್ನು ಒಳಗೊಂಡ ಸ್ಮಾರ್ಟ್ ಲಾಂಜ್ ಯೋಜನೆಯನ್ನು ಪ್ರಾಯೋಗಿಕವಾಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗವಿರುವ ಅಮಾನಿಕೆರೆ ಆವರಣದಲ್ಲಿ ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ ಎಂದು ಡಾ: ಶಾಲಿನಿ ರಜನೀಶ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap