ಶಿಗ್ಗಾವಿ :
ವಿದ್ಯಾರ್ಥಿಗಳು ಸ್ಕೌಟ್ ಮತ್ತು ಗೈಡ್ಸ್ ನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಶಿಸ್ತು, ಸಂಯಮ, ಶಾಂತಿ ಯೊಂದಿಗೆ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವುದನ್ನು ಕಲಿಸಿ ಕೊಡುತ್ತದೆ ಎಂದು ಭಾರತ ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಸಂಚಾಲಕ ಎ.ಎಲ್. ಶೇಖಸುರಣಗಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ನಡೆದ ಸ್ಕೌಟ್ ಮತ್ತು ಗೈಡ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳ ಸಹಾಯದಿಂದ ಮಹಾಮಸ್ತಾಭಿಕೇüಷ ದಂತಹ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಆದ್ದರಿಂದ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳಲ್ಲಿ ಇದರ ಘಟಕಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಚಿತ್ರದುರ್ಗದ ಜ್ಯೋತಿರಾಜ (ಕೋತಿರಾಜ) ಮಾತನಾಡಿ, ಜಲಪಾತ, ಗುಡ್ಡಗಾಡು, ದುರ್ಗಮ ಸ್ಥಳಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣೆ ಮಾಡುವ ನಮ್ಮಂತಹವರನ್ನು ಸರಕಾರ ಗುರುತಿಸಿ ಬೇಕಾಗಿದೆ. ನನ್ನಿಂದ ತರಭೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ಸ್ಟೈಪಂಡ ನೀಡಲು ಮುಂದಾಗಬೇಕು ಎಂದು ಹೇಳಿದರು.
ಪ್ರೋ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಚಲನಚಿತ್ರ ನಟರ ವಯಕ್ತಿಕ ಸುದ್ದಿಗಳನ್ನು ವಾರ ಗಂಟಲೇ ಬಿತ್ತರಿಸುವ ಮಾಧ್ಯಮಗಳು ಜ್ಯೋತಿರಾಜರಂತಹ ಸಾಹಸಿಗರನ್ನು ಮಾಧ್ಯಮದ ಮೂಲಕ ಪರಿಚಯಿಸಲು ಮುಂದಾದಾಗ ಇಂತವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಜ್ಯೋತಿರಾಜ ಮತ್ತು ಶಿಷ್ಯ ಅರ್ಜುನ ರವರು ಮೂರು ಅಂತಸ್ತಿನ ಕಾಲೇಜ ಕಟ್ಟಡವನ್ನು ಕ್ಷಣಾರ್ಧದಲ್ಲಿ ಎರಡು ಬಾರಿ ಹತ್ತಿ ಇಳಿದು ವಿದ್ಯಾರ್ಥಿಗಳನ್ನು ರೋಮಾಂಚನಗೊಳಿಸಿದರು.
ಪ್ರಾಚಾರ್ಯ ಡಿ.ಎಸ್.ಸೊಗಲದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರೋ.ಡಾ. ಸಂತೋಷಕುಮಾರ ಕಟಕೆ, .ಯಮುನಾ ಕೊಣೇಸರ್, ಕೆ.ಪಿ ಬೆಣಗೇರಿ, ಸುಜಾತಾ ಕಡ್ಲಿ, ನಿಂಗಪ್ಪ ಕಲಕೋಟಿ, ಲುಬ್ನಾನಾಜ್, ನಾಜನೀನ ಹಿರೇಕುಂಬಿ, ವಿಜಯಲಕ್ಷ್ಮಿ, ರಘುಪತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರೋ. ಆನಂದ ಇಂದೂರ ಸ್ವಾಗತಿಸಿದರು. ವಿಜಯ ಗುಡಗೇರಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
