ಮಲೇಬೆನ್ನೂರು ;
ವೀರಶೈವ ಧರ್ಮದ ನೈಜ ಆಚರಣೆಯಿಂದ ಸುಖ ಸಾಧ್ಯವಿದೆ ಎಂದು ಬಾಳೆಹೊನ್ನೂರು ಪೀಠದ ರಂಭಾಪುರಿ ವೀರಸೋಮೇಶ್ವರ ಭಗವಾತ್ಪಾದರು ಅಭಿಪ್ರಾಯಪಟ್ಟರು.ಪಟ್ಟಣದ ವೀರಭದ್ರೇಶ್ವರ ರೈಸ್ ಇಂಡಸ್ಟ್ರೀಸ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಗಳ ಇಷ್ಟಲಿಂಗ ಮಹಾಪೂಜೆ ನಂತರ ಭಕ್ತರಿಗೆ ಧರ್ಮ ಸಂದೇಶ ನೀಡಿದ ಶ್ರೀಗಳು ಹಿರಿಯ ವೀರ ಗಂಗಾಧರರು ಲಿಂಗ ಪೂಜೆ ಮಾಡುತ್ತಾ ಧರ್ಮಕ್ಕೆ ಬಾಳಿದ್ದರು,ಧರ್ಮವನ್ನು ಉಳಿಸಲು ಶ್ರಮಿಸಿದರು.
ಮಲೆನಾಡಿನ ಹೆಸರಿಗೆ ಮಾತ್ರ ವೀರಶೈವ ಧರ್ಮದವಿದೆ.ಆದರೆ ಕೆಲ ಭಾಗದಲ್ಲಿ ಲಿಂಗವನ್ನು ಬಾಗಿಲಿಗೋ ಜಗುಲಿಗೊsೀ ನೇತು ಹಾಕಿರುತ್ತಾರೆ.ಗುರು ನೀಡಿದ ಇಷ್ಟಲಿಂಗವನ್ನು ಮರೆತಿದ್ದಾರೆ.ಯಾರಾದ್ರೂ ಲಿಂಗವನ್ನು ಮುಟ್ಟಿದರೆ ಅಪವಿತ್ರವೆಂಬ ಮೂಢನಂಬಿಕೆ ಇದೆ. ವೀರ ಗಂಗಾಧರರು ಅಪವಿತ್ರಗೊಳಿಸಲು ಲಿಂಗವನ್ನು ಹೃದಯದ ಹೊರಗೆ ಧರಿಸಲು ಸೂಚಿಸಲಾಗಿದೆ.ಪ್ರತಿನಿತ್ಯ ಎರಡು ನಿಮಿಷ ಪೂಜೆ ಮಾಡಿ ಎಂದು ಕರೆ ನೀಡಿದರು.
ಸಂಸ್ಕಾರಯುಕ್ತ ಜೀವನ ನಡೆಸಲು ಭಕ್ತರಿಗೆ ಮಾರ್ಗದರ್ಶನ ನೀಡುವುದು ಧರ್ಮ ಪೀಠಗಳ ಜವಾಬ್ದಾರಿಯಾಗಿದೆ. ಉತ್ತಮರೂ ರಾಜಕೀಯ ಕ್ಷೇತ್ರದಲ್ಲಿ ಭಾಗಿಯಾಗಿ ಜನ ಸೇವೆ ಮಾಡಿ ನಾಡಿನ ಅಮೂಲ್ಯ ಕೊಡುಗೆ ನೀಡಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ,ಚಿದಾಣಂದಪ್ಪನವರನ್ನು ಶ್ಲಾಘಿಸಿದರು. ತಾವತೆಕೆರೆ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ,ವರ್ತಕ ಪಂಚಣ್ಣ,ಮಾಜಿ ಶಾಸಕ ಶಿವಶಂಕರ,ವೃಷಭೇಂದ್ರಪ್ಪ ಮತ್ತಿತರರು ಹಾಜರಿದ್ದರು.
ಮಲೇಬೆನ್ನೂರು ಹರಿಹರ ತಾಲ್ಲೂಕು ಕೊಕ್ಕನೂರು ಗ್ರಾಮದ ಶ್ರೀ ಆಂಜನೇಯ ದೇವಸ್ದಾನದ ಮುಂಭಾಗದಲ್ಲಿ ದಿನಾಂಕ 31-03-2019 ರಂದು ಬೆಳ್ಳಗ್ಗೆ 11-00 ಗಂಟೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ನಿಮಿತ್ತ ಮಾಜಿ ಮುಖ್ಯಮಂತ್ರಿಗಳು ಪ್ರಚಾರ ¸ಭಾ ಕಾರ್ಯಕ್ರಮ ನಡೆಯಲಿದ್ದು ಕಾರಣ ತಾವುಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೇಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಕೆ.ಜಿ.ರಾಜಣ್ಣ ಕಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
