ದಾವಣಗೆರೆ
ಶ್ರೀರಾಮ ನವಮಿ ಪ್ರಯುಕ್ತ ಶನಿವಾರ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ನಗರದ ಪಿಜೆ ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ತೊಟ್ಟಿಲೋತ್ಸವ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ಪುನೀತರಾದರು.
ಹಳೇ ನಿಲ್ದಾಣದ ಎದುರು ಗೆಳೆಯರ ಬಳಗದಿಂದ ಸಾರ್ವಜನಿಕರಿಗೆ ಕೊಸಂಬರಿ ವಿತರಿಸಲಾಯಿತು.ಪಿಬಿ ರಸ್ತೆಯ ಪಂಚಲಿಂಗೇಶ್ವರ ದೇಗುಲ, ಸರಸ್ವತಿ ನಗರದ ಪಂಚಮುಖಿ ಆಂಜನೇಯ ದೇಗುಲದಲ್ಲಿ ಆಂಜನೇಯ ವಿಶೇಷ ಪೂಜೆ ನೆರವೇರಿಸಲಾಯಿತು.
ಶ್ರೀರಾಮ ಸೇನೆ ವತಿಯಿಂದ ನಗರದ ಶಿರಮಗೊಂಡನ ಹಳ್ಳಿ ರಸ್ತೆಯಲ್ಲಿರುವ ವೈಷ್ಣವಿ ಚೇತನ ಶಾಲೆ ಬಳಿ ಸಾರ್ವಜನಿಕರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು. ಈ ವೇಳೆ ಶಾಲೆಯ ಅಧ್ಯಕ್ಷೆ ವಿಜಯಲಕ್ಷ್ಮೀ ವೀರಮಾಚಿನೇನಿ, ಪರಶುರಾಮ ನಡುಮನಿ, ನೂತನ್ ಆಚಾರ್ಯ, ವಿನೋದ್ ರಾಜ್, ಕುಮಾರ್ ನಾಯಕ, ಕೆ.ಸಿ ಪ್ರೇಮಕುಮಾರ್, ಕಿರಣ್ ಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/13_dvg_03_2_a.gif)