ವಸಂತಕುಮಾರ ಕಡತಿ ಅವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ

ಹಾವೇರಿ :

       ಮೈಲಾರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಬಳ್ಳಾರಿ ಜಿಲ್ಲಾ ಘಟಕ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮೈಲಾರ ಬಸವಲಿಂಗ ಶರಣಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾವೇರಿಯ ಮಿಮಿಕ್ರಿ ಕಲಾವಿದ ವಸಂತಕುಮಾರ ಕಡತಿ ಅವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

       ಮೈಲಾರ ಬಸವಲಿಂಗ ಶರಣರ 333 ತ್ರಿಪದಿಗಳು ಇಡೀ ಮಾನವ ಕುಲಕ್ಕೆ ನಿತ್ಯ ಜೀವನದ ಸಂದೇಶ ನೀಡುವಂತಿದ್ದು ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸೇವೆ, ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ವರ್ಷ ಖ್ಯಾತ ಹಾಸ್ಯ ಕಲಾವಿದ ಕೂಡ್ಲಗಿಯ ಕೋಗಳಿ ಕೊಟ್ರೇಶ, ಭದ್ರಾವತಿಯ ಜ್ಯೂ.ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ, ಹಾವೇರಿಯ ಮಿಮಿಕ್ರಿ ಕಲಾವಿದ ವಸಂತಕುಮಾರ ಕಡತಿ, ಹೊಸದುರ್ಗದ ಜಾದೂ ಮೋಹನಕುಮಾರ ಹಾಗೂ ಹೂವಿನಹಡಗಲಿಯ ಮಾಜಿ ಯೋಧ ಹೆಚ್.ಆರ್. ಮಹಮ್ಮದ ರಫಿ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

         ಕಾರ್ಯಕ್ರಮದ ಸಾನಿಧ್ಯವನ್ನು ನಂದಿಪುರ ಮಹೇಶ್ವರ ಸ್ವಾಮೀಜಿ, ಅಧ್ಯಕ್ಷತೆಯನ್ನು ಜಾನಪದ ಕಲಾವಿದ ನಿಂಗಣ್ಣ ಗಂಗಣ್ಣನವರ ವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಪುಟ್ಟಪ್ಪ ತಂಬೂರಿ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link