ತಿಪಟೂರು

ನಗರದ ಕೆ.ಆರ್.ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ ಇಡ್ಲಿ-ಚಟ್ನಿ ಸೇವಿಸಿದ ವಿದ್ಯಾರ್ಥಿಗಳಲ್ಲಿ ಐವರು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಮುದ್ರಾ ಆಸ್ಪತ್ರೆಗೆ ದಾಖಲಿಸಿದ್ದು ಡಾಕ್ಟರ್ ಹೇಳಿಕೆಯ ಪ್ರಕಾರ ಫುಡ್ಪಾಯಿಸನ್ನಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಅವರಿಗೆ ಚಿಕಿತ್ಸೆ ನೀಡಿ ಮಕ್ಕಳನ್ನು ನಿಗಾದಲ್ಲಿ ಇಡಲಾಗಿದೆ ಎಂದರು.
ಹೆಸರಿಗೆ ವಸತಿ ಶಾಲೆ ಆದರೆ ಮಕ್ಕಳೆಲ್ಲರೂ ಅವರಮನೆಗಳಿಂದಲ್ಲೇ ದಿನನಿತ್ಯ ಆಗಮಿಸುತ್ತಿದ್ದಾರೆ. ಪ್ರಾಂಶುಪಾಲ ಸಂತೋಷ್ ಎಷ್ಟು ಮಕ್ಕಳು ಹಾಸ್ಟೆಲ್ನಲ್ಲಿವೆ ಮತ್ತು ಎಷ್ಟು ಮಕ್ಕಳು ಮನೆಯಿಂದ ಬರುತ್ತವೆಂಬ ಗೊಂದಲದಲ್ಲಿರುವಂತಿದೆ. ಏಕೆಂದರೆ ಒಂದು ಬಾರಿ 60 ಮಕ್ಕಳಿಗೆ ತಿಂಡಿ ಮಾಡಲಾಗಿತ್ತು ಕೆಲವರು ತಿಂದಿಲ್ಲ ಅದಕ್ಕೆ ಸುಮಾರು 30 ಜನರಿಗಾಗುವಷ್ಟು ಹೇಳುವಂತೆ ಉಳಿದಿದೆ ಎನ್ನುತ್ತಾರೆ. ಆದರೆ ಇನ್ನೊಂದು ಬಾರಿ 100 ಮಕ್ಕಳಿದ್ದಾರೆ ಎನ್ನುವ ಗೊಂದಲವನ್ನು ಮೂಡಿಸುತ್ತಾರೆ.
ಕೊಳತ/ಕಳಪೆ ತರಕಾರಿಗಳಿಂದ ಪೋಷಕಾಂಶ :
ನಗರಸಭೆಯವರು ಹಸಿಕಸವನ್ನು ಎಸೆಯಬೇಡಿ ಅದರಿಂದ ಉತ್ತಮವಾದ ಪೋಶಕಾಂಶಗಳಿಂದ ಕೂಡಿದ ಗೊಬ್ಬರವನ್ನು ತಯಾರಿಸಬಹುದೆಂಬ ಯೋಜನೆಯನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವ ಈ ವಸತಿ ಶಾಲೆಯು ಹಸಿಕಸದಿಂದ ಪೋಷಕಾಂಶಗಳನ್ನು ಪೂರೈಸಬಹುದೆಂದು ಕಸಕ್ಕೆ ಹಾಕುವಂತಹ ಕೊಳೆತ / ಕಳಪೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ತಿನ್ನಿಸುತ್ತಿದ್ದಾರೆ.
ಪ್ರಾಂಶುಪಾಲ ಒಬ್ಬರೇ :
ಈ ಶಾಲೆಯಲ್ಲಿ 6, 7, 8 ನೇ ತರಗತಿಯಲ್ಲಿ ಒಟ್ಟು ಸುಮಾರು 150 ವಿದ್ಯಾರ್ಥಿಗಳಿದ್ದಾರೆ ಆದರೆ ಅವರಿಗೆ ಒಬ್ಬರೇ ಒಬ್ಬರು ಖಾಯಂ ಶಿಕ್ಷಕರಿಲ್ಲ, ಎಲ್ಲ ಅತಿಥಿ ಶಿಕ್ಷಕರುಗಳೇ ನಡೆಸುತ್ತಿದ್ದಾರೆ ಇನ್ನು ಇರುವ ಒಬ್ಬರೇ ಒಬ್ಬರೆಂದರೆ ಪ್ರಾಂಶುಪಾಲ ಇವರಿಗೆ ಇನ್ನೂ ಕುಣಿಗಲ್ ಮತ್ತು ತುರುವೇಕೆರೆಗಳನ್ನು ಹೆಚ್ಚುವರಿಯಾಗಿ ನೀಡಿರುವುದರಿಂದ ಅವುಗಳನ್ನು ನೋಡಿಕೊಳ್ಳಲಾಗದೆ ಇಲ್ಲೂ ಇರಲಾಗದೆ ಎಲ್ಲಾಕಡೆಗೂ ಸುತ್ತಿತ್ತಿದ್ದು ವಾರಕ್ಕೆ ಎರಡು ಮೂರುಬಾರಿ ಬೇಟಿನೀಡುತ್ತಿದ್ದು ಅಡುಗೆಯವರು ಮತ್ತು ವಾಚ್ಮನ್ಗಳು ತಂದಿದ್ದೆ ತರಕಾರಿ ಹಾಕಿದ್ದೇ ಊಟ ಎನ್ನುವಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
