ಚೆನ್ನಿಗಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಸುರೇಶ್ ಗೌಡರಿಗೆ ಇಲ್ಲ..!!

ಕೊರಟಗೆರೆ

     ಕಷ್ಟ ಅಂತ ಮನೆ ಭಾಗಲಿಗೆ ಕ್ಷೇತ್ರದ ಜನ ಹೋದರೇ ಜಾತಿ ಬೇದವಿಲ್ಲದೆ ಮನೆಗೆ ಬಂದ ಪ್ರತಿಯೊಬ್ಬರಿಗೂ ಊಟ ಹಾಕಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ಮಾಜಿ ಸಚಿವ ಸಿ.ಚನ್ನಿಗಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಶಾಸಕ ಸುರೇಶ್‍ಗೌಡರಿಗೆ ಕೊರಟಗೆರೆ ಚನ್ನೀಗಪ್ಪ ಅಬಿಮಾನಿ ಬಳಗದ ಅಧ್ಯಕ್ಷ ಎಲ್.ರಾಜಣ್ಣ ತಿರುಗೇಟು ನೀಡಿದರು.ಬೈಲಾಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಚನ್ನಿಗಪ್ಪ ಅಭಿಮಾನಿ ಬಳಗದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

      ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಸಿ.ಚನ್ನಿಗಪ್ಪನವರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ತುಮಕೂರು ಗ್ರಾಮಾಂತರ ವಿಧಾನಸಬಾ ಕ್ಷೇತ್ರದಲ್ಲಿ ಸೋತು ಹತಾಷೆ ಗೊಂಡಿರುವ ಸುರೇಶ್ ಗೌಡರು ಹಾಲಿ ಶಾಸಕ ಗೌರಿಶಂಕರ್ ಗೆಲುವಿಗೆ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರೆಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದ್ದು, ಇವರು 2013 ರ ಚುನಾವಣೆಯಲ್ಲಿ 600 ಮತಗಳಿಂದ ಗೌರಿಶಂಕರ್ ವಿರುದ್ದ ಗೆದ್ದಾಗ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರೆಂದು ತಿಳಿಸಲಿ ಎಂದರು.

      ಕೆ.ಎಂ.ಫ್ ನಿರ್ದೇಶಕ ಈಶ್ವರಯ್ಯ ಮಾತನಾಡಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತ ಮೇಲೆ ಬುದ್ದಿ ಸೀಮಿತವಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತೀರುವ ಮಾಜಿ ಶಾಸಕ ಸುರೇಶ್‍ಗೌಡ ನಮ್ಮ ನಾಯಕರಾದ ಮಾಜಿ ಸಚಿವ ಸಿ.ಚನ್ನಿಗಪ್ಪರ ವಿರುದ್ದ ಮಾತನಾಡಿರುವುದು ಸರಿ ಇಲ್ಲ.

      ಇವರು 2013 ರ ಚುನಾವಣೆಯಲ್ಲಿ ಗೌರಿಶಂಕರ್ ಸೋತಾಗ ಯಾರ ವಿರುದ್ದವೂ ಆರೋಪ ಮಾಡದೆ ಜನಾದೇಶಕ್ಕೆ ತಲೆಬಾಗಿ ತಾಳ್ಮೆಯಿಂದ ಇದ್ದು ಮೆತ್ತೆ ಜನರ ಪ್ರೀತಿ ಗಳಿಸಿ ಶಾಸಕರಾಗಿ ಆಯ್ಕೆಯಾದರು ಆದರೆ ಸುರೇಶ್‍ಗೌಡ ಕೆಳ ಮಟ್ಟದ ರಾಜಕಾರಣ ಮಾಡುತ್ತಿದ್ದು ಲೋಕಸಭಾ ಚುನಾವಣೆಗೆ ಸ್ಪರ್ದಿಸಲು ಟಿಕೆಟ್ ನೀಡಿಲ್ಲವೆಂದು ಬಿಜೆಪಿ ಕಾರ್ಯಕ್ರಮಗಳಲ್ಲಿ ವಿನಾಕಾರನ ಇತರರನ್ನು ಆರೋಪ ಮಾಡುತ್ತಾ ಅಭ್ಯರ್ಥಿ ಜಿ.ಎಸ್.ಬಸವರಾಜು ಸೊಲಿಸಲು ಸಂಚುರೂಪಿಸಿದ್ದಾರೆ ಎಂದು ತಿಳಿಸಿದರು.

     ದಲಿತ ಮುಖಂಡ ಚಿಕ್ಕರಂಗಯ್ಯ ಮಾತನಾಡಿ ಸೋಲಿನ ಹತಾಶೆಯಲ್ಲಿ ಹೇಗೆಗೋ ಮಾತನಾಡುತ್ತಿದ್ದು ಮೊದಲು ಯಾವುದಾದರೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿ ರಾತ್ರಿ ವೇಳೆ ಬಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಚನ್ನಿಗಪ್ಪ ಮತ್ತು ಶಾಸಕ ಗೌರಿಶಂಕರ್ ವಿರುದ್ದ ಬಾಯಿಗೆ ಬಂದಂತೆ ಮಾತನಾಡುವುದು ಸರಿ ಇಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭಧಲ್ಲಿ ಮಾಜಿ ಗ್ರಾ,ಪಂ.ಅಧ್ಯಕ್ಷ ಸಿದ್ದಲಿಂಗಪ್ಪ, ಪಿಎಲ್‍ಡಿ ಬ್ಯಾಂಕ್ ಮಾಜಿ ನಿದೇರ್ಶಕ ವೆಂಕಟಪ್ಪ, ಕುರುಬ ಸಮಾಜದ ತಾಲೂಕು ಉಪಾಧ್ಯಕ್ಷ ರಂಗಣ್ಣ, ಮುಖಂಡರಾದ ಶ್ರೀನಿವಾಸ್ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ತಿಮ್ಮಣ್ಣ, ಅಭಿಮಾನಿ ಬಳಗದ ನಾಗರಾಜು, ನಾಗಭೂಷಣ್, ಶಿವರಾಮಯ್ಯ, ಕಂಬದಹಳ್ಳಿರೆಡ್ಡಿ, ಗುಂಡಿನಪಾಳ್ಯ ನಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link