ಬೆಂಗಳೂರು: 

ಇಡೀ ದೇಶದಲ್ಲೇ ಆರ್ಥಿಕ ಸಂಕಷ್ಟದಲ್ಲಿರುವವರ ಸಂಖ್ಯೆ ಹೆಚ್ಚಿರುವಾಗ ಬೆಂಗಳೂರಿನಲ್ಲೊಬ್ಬ ಟೆಕ್ಕಿ ತನ್ನ ಆರ್ಥಿಕ ಸಂಕಷ್ಟ ತಡೆಯಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ನೀಲಾದ್ರಿ ಲೇಔಟ್’ನ ರಾಘವೇಂದ್ರ ಪಿಜಿಯಲ್ಲಿ ಇದ್ದ ಕೆ.ಸೇತುಕುಮಾರ್ (30) ತನ್ನ ಸ್ತೋಮತೆಗೂ ಮೀರಿ ಸಾಲ ಮಾಡಿಕೊಂಡು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ವರದಿಗಳಿಂದದ ತಿಳಿದು ಬಂದಿದೆ. ಸೋಮವಾರ ಆತನ ಸ್ನೇಹಿತರು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಸಂಜೆ 7 ಗಂಟೆಗೆ ಪಿಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪಿಜಿಯ ನಿರೀಕ್ಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
