ಹಾವೇರಿ :

ಜಿಲ್ಲೆಯಲ್ಲಿ ಸುರಿದ ಮಳೆಯಿಂದ 30 ಹಳ್ಳಿಗಳು ಜಲಾವೃತಗೊಂಡಿವೆ. ನದಿಯ ನೀರಿನಿಂದ ಮನೆ ಕಳೆದು ಕೊಂಡಿರುವ ಜನರಿಗೆ ಎತ್ತರ ಪ್ರದೇಶಗಳಲ್ಲಿ, ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಮಳೆಯಿಂದ ಅರ್ಧಕ್ಕಿಂತ ಹೆಚ್ಚು ಭಾಗ ಮನೆಗಳಿಗೆ ಹಾನಿಯಾಗಿದ್ದರೆ ಅಂತಹ ಮನೆಗಳಿಗೆ ತಾತ್ಕಾಲಿಕವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದ್ದು, ಉತ್ತಮ ಜಾಗೆಯಲ್ಲಿ ಶೆಡ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ನೆಹರೂ ಓಲೇಕಾರ ನಿರಾಶ್ರಿತರಿಗೆ ಭರವಸೆ ನೀಡಿದರು.
ಇಲ್ಲಿನ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು ಚಿಂತಿಸುವ ಅಗತ್ಯವಿಲ್ಲ. ಪುನರ್ವಸತಿ ಕಲ್ಪಿಸಲು ಯಾವುದೇ ಹಣಕಾಸಿ ಸಮಸ್ಯೆಯಿಲ್ಲ.ನದಿಗಳ ಅಬ್ಬರದಿಂದ ಹಾವೇರಿ ತಾಲೂಕಿನಲ್ಲಿ 54 ನಿರಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾಗಿದ್ದಕ್ಕೆ 11 ನಡೆಯುತ್ತಿವೆ. ಒಟ್ಟು, 1858 ಕುಟುಂಬಗಳು ನಿರಾಶ್ರಿತರಾಗಿದ್ದು, ಅದರಲ್ಲಿ 6635 ಆಶ್ರಯ ಪಡೆದುಕೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ 599 ಮನೆಗಳು ಬಿದ್ದಿದ್ದರೆ, ಭಾಗಶಃ 3355 ಸೇರಿದಂತೆ ಒಟ್ಟುಮ 3954 ಮನೆಗಳು ಹಾನಿಯಾಗಿವೆ. ಇನ್ನು ಕೃಷಿ ಬೆಳೆ ಭೂಮಿಯೂ 11656 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ. ತೋಟಗಾರಿಕೆ ಬೆಳೆ 425 ಹೆಕ್ಟರ್ ಬೆಳೆ ನಾಶವಾಗಿದೆ.
ಹಾವೇರಿ ವಿಧಾನಸಭಾ ಕ್ಷೇತ್ರದ ಸವಣೂರು ತಾಲೂಕಿನಲ್ಲಿ ಆರಂಭದಲ್ಲಿ 26 ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಅದರಲ್ಲಿ 1092 ಕುಟುಂಬಗಳ ಒಟ್ಟು 3369 ಜನರು ಆಶ್ರಯ ಪಡೆದುಕೊಂಡಿದ್ದರು. 26 ನಿರಾಶ್ರಿತರ ಕೇಂದ್ರದಲ್ಲಿ 5 ನಡೆಯುತ್ತಿವೆ. 638 ಮನೆಗಳು ಪೂರ್ಣ ಪ್ರಮಾಣದಲ್ಲಿ ನಾಶವಾಗಿದ್ದರೆ, ಭಾಗಶಃ 899 ಸೇರಿದಂತೆ ಒಟ್ಟು 1537 ಮನೆಗಳಿಗೆ ಹಾನಿಯಾಗಿದೆ. ಕೃಷಿ ಬೆಳೆ ಹಾನಿಯೂ 8044 ಹೆಕ್ಟರ್ ಹಾಳಾಗಿದ್ದರೆ, ತೋಟಗಾರಿಕೆ ಬೆಳೆ 310 ಹೆಕ್ಟರ್ನಷ್ಟು ಹಾಳಾಗಿದೆ. ಇದರೊಂದಿಗೆ 4 ಶಾಲೆಗಳು ನೀರಿನಿಂದ ಜಲಾವೃತಗೊಂಡಿವೆ, 4 ಕೊಠಡಿಗಲು ಕುಸಿತ ಖಂಡಿವೆ.
ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ಹಾನಿಗೆ ಯಾರು ಚಿಂತಿಸುವ ಅಗತ್ಯವಿಲ್ಲ. ಎಲ್ಲ ಹಂತದಲ್ಲೂ ಸರಕಾರ ನಿರಾಶ್ರಿತರೊಂದಿಗೆ ಇದೆ. ಮುಖ್ಯಮಂತ್ರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ. ಮನೆ ನಿರ್ಮಾಣಕ್ಕೆ 5 ಲಕ್ಷ ರೂ, ಭಾಗಶಃ ಮನೆ ಕಳೆದುಕೊಂಡಿರುವ ಕುಟುಂಬಕ್ಕೆ 1 ಲಕ್ಷ ರೂ ನೀಡಲಿದ್ದಾರೆ. ನಿರಾಶ್ರಿತರ ಪುನರ್ವಸತಿಗೆ ಯಾವುದೇ ಹಣಕಾಸಿ ಸಮಸ್ಯೆ ಎದುರಾಗುವುದಿಲ್ಲ. ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಗದೀಶ ಮಲಗೋಡ.ಕೆಸಿ ಕೋರಿ.ಸುಣಗಾರ ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
