ಕೊರೋನಾ ಸೋಂಕಿನಿಂದ ಕಂಗಾಲಾದ ಮಾವು ಬೆಳೆಗಾರರು..!

ಚೇಳೂರು

       ಈ ವರ್ಷ ಮಾವಿನ ಬೆಳೆಯು ಇಲ್ಲ ಬಂದತಂಹ ಬೆಳೆಗೆ ಸರಿಯಾದ ಬೆಲೆಯೂ ಇಲ್ಲದ ಜೊತೆಗೆ ಕೊರೊನಾದ ಸೋಂಕಿನಿಂದ ಕೆಂಗ್ಗೆಟ್ಟಿರುವ ಮಾವುಬೆಳೆಗಾರರು ಹಾಗೂ ವರ್ತಕರು. ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆ ಗುಬ್ಬಿ ತಾಲ್ಲೂಕಿನ ಚೇಳೂರು.

      ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಾವಿನ ಹಣ್ಣುಗಳು ಈ ಮಾರುಕಟ್ಟೆಗೆ ಬರುತ್ತಿವೆ. ಬಂದರು ಸಹ ಅದನ್ನು ಮಾರಾಟ ಮಾಡಬೇಕಾದರೆ ರೈತರು ಸೂಕ್ತವಾದ ತಮ್ಮ ದಾಖಲೆಗಳನ್ನು ತಂದು ಎಪಿಎಂಸಿಯ ಉಪಮಾರುಕಟ್ಟೆ ಒಳಗಡೆ ಪ್ರವೇಶಿಸ ಬೇಕಾಗಿದೆ. ಇವರ ಜೊತೆಗೆ ವರ್ತಕರು,ಹಮಾಲಿಗಳು,ಸಾಗಣಿಕೆ ಮಾಡಲು ತಂದ ವಾಹನದ ಚಾಲಕರು ,ಖರೀದಿದಾರರು ಹಾಗೂ ಯಾರೇ ಆಗಲಿ ಈ ಮಾರುಕಟ್ಟೆ ಒಳಗಡೆ ಪ್ರವೇಶ ಮಾಡ ಬೇಕಾದರೆ ಆರೋಗ್ಯ ಸಿಬ್ಬಂದಿಗಳಿಂದ ಥರ್ಮಲ್ ಸ್ಕ್ಯಾನಿಂಗ್ ನಂತರವೇ ಪ್ರವೇಶಿಸದ ಅನುಮತಿ ಜೊತೆಗೆ ಚೇಳೂರು ಪೊಲೀಸ್‍ರ ಬೀಗಿ ಭದ್ರತೆ ಇದೆ ಈ ಮಾರುಕಟ್ಟೆಗೆ.

    ಮಾವು ಮಾರಟದ ಮಂಡಿಗಳು ಚೇಳೂರಿನ ಎಪಿಎಂಸಿಯ ಉಪಮಾರುಕಟ್ಟೆ ತೆರೆಯುವ ಮೊದಲು ಜಿಲ್ಲಾ . ತಾಲ್ಲೂಕು.ಹೊಬಳಿಯ ಆಡಳಿತ ಅಧಿಕಾರಿಗಳು ಗ್ರಾಮದ ಸುತ್ತಮುತ್ತ ಜಮೀನಗಳ ಪರಿಶೀಲನೆ ಮಾಡಿ ಅಲ್ಲಿನ ಮಾಹಿತಿ ಗಳನ್ನು ಪಡೆದುಕೊಂಡು ನಂತರ ಯಾರು ಸಹ ಕೊರೊನಾದ ಭೀತಿಯಿಂದ ಜಮೀನನ್ನು ನೀಡಲು ಮುಂದೆ ಬಾರದ ಕಾರಣ ಮಾವು ಬೆಳೆಗಾರನಾದ ರೈತರಿಗೆ ತೊಂದರೆಯಾಗ ಬಾರದು ಎಂದು ಹಲವು ಸಭೆಗಳನ್ನು ನೆಡೆಸಿ ಚೇಳೂರಿನ ಈ ಕೃಷಿ ಉತ್ಪನ್ನ ಉಪಮಾರುಕಟ್ಟೆಯನ್ನು ಆಯ್ಕೆ ಮಾಡಲಾಯಿತು.ಇಲ್ಲಿ ವಾರದ ಮಂಗಳವಾರ ,ಬುಧವಾರ, ಗುರುವಾರ, ಶುಕ್ರವಾರದ ದಿನದೊಂದು ಮಾವು ವ್ಯಾಪಾರ ವಹಿವಾಟುಗೆ ಅನುಮತಿಯನ್ನು ನೀಡಲಾಗಿದೆ.

    ಇಲ್ಲಿ ಬಂದು ವಹಿವಾಟು ಮಾಡುವುದರಿಂದ ಯಾವುದೇ ರೀತಿಯ ಸೊಂಕು ತಗಲ ಬಾರದು ಎಂದು ಮಾರುಕಟ್ಟೆಯ ಸುತ್ತ ಹಾಗು ಮಂಡಿಗಳ ಸುತ್ತ ಪರದೆಯನ್ನು ಹಾಕಿಸಿ ಕೊಳ್ಳಬೇಕು. ಪ್ರತಿ ಮಂಡಿಗಳ ಮುಂದೆ ನೀರು ಸೋಪು ಅಥವಾ ಸಾನಿಸ್ಟರ್ ಇಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳು ಸೂಚಿಸಿದ್ದಾರೆ ಮಾರುಕಟ್ಟೆಯ ಗೇಟ್‍ನ ಬಳಿ ಆರೋಗ್ಯ,ಕಂದಾಯ.ಪೊಲೀಸ್ ಇಲಾಖೆಯೊಂದಿಗೆ ಎಪಿಎಂಸಿ ಮಾರುಕಟ್ಟೆಯ ಸಿಬ್ಬಂದಿಗಳಿಂದ ಸೂಕ್ತ ಪರಿಶೀಲನೆ ಮಾಡಿ ಒಳಗಡೆ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗುತ್ತಿದೆ. ಜೊತೆಗೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ವಾಹನಗಳ ಮುಖಾಂತರ ಮಾವು ತೆಗೆದುಕೊಂಡು ಹೋಗಲು ಬರುವ ವಾಹನ ಚಾಲಕರರಿಗೆ. ಇಲ್ಲಿ ಕೆಲಸವನ್ನು ಮಾಡುವ ಹಮಾಲಿಗಳಿಗೆ. ಮಂಡಿಯ ವರ್ತಕರಿಗೂ ಆರೋಗ್ಯ ತಪಾಸಣೆ.ಗಂಟಲು ಪರೀಕ್ಷೆಯನ್ನು ಸಹ ಮಾಡಿಸಲಾಗಿದೆ.

    ಇತಂಹ ವ್ಯವಸ್ಥೆಯೊಂದಿಗೆ ಈಗ ಬರುತ್ತಿರುವ ಮಾವುಗಳಾದ ಬಾದಾಮಿಗೆ 20 ರಿಂದ 23 ರೂಗಳು, ರಸಪುರಿಗೆ 18 ರಿಂದ 20 ರೂಗಳು.ಮಲಗೊಬ್ಬಗೆ 25 ರಿಂದ 30 ರೂಗಳು,ತೊತ್ತಪುರಿಗೆ 8 ರಿಂದ 10 ರೂಗಳು ನಾಟಿಮಾವುಗೆ 8 ರೂಗಳು ಕೆಜಿಗೆ ಮಾತ್ರ ಸೀಗುತ್ತಿದೆ ರೈತರಿಗೆ. ಇದರ ಜೊತೆಗೆ ಮಂಡಿ ವರ್ತಕರಿಗೆ ಕಮೀಷನ್ ಸಹ ನೀಡ ಬೇಕಾಗಿದೆ ರೈತರು.

     ಮಾರುಕಟ್ಟೆಗೆ ಬಾರದ ಕೆಲವು ರೈತರ ಮಾವಿನ ತೋಟಗಳಿಂದ ನೇರವಾಗಿ ವರ್ತಕರು ಹೋಗಿ ಮಾವು ಖರೀದಿಯನ್ನು ಮಾಡಿಕೊಂಡು ಸಾಗಾಟ ಮಾಡುತ್ತಿದ್ದರೆ ಇದರಿಂದ ಕೊರೊನಾ ಸೋಂಕು ಹರಡುವುದಿಲ್ಲವೆಂದು ಸಾರ್ವಜನಿಕರು ದೂರುಗಳು ಸಹ ಕೇಳಿ ಬರುತ್ತಿದೆ. ಈಗ ಈ ಮಾರುಕಟ್ಟೆಯಿಂದ ಮಾರಟವಾದ ಮಾವು ರಾಜ್ಯದ ಹಲವು ಜಿಲ್ಲೆಗಳ ಜೊತೆಗೆ ಹೊರ ರಾಜ್ಯಗಳಿಗೆ ಮಾವು ಲಾರಿ ಹಾಗೂ ಇತರ ವಾಹನಗಳ ಮುಖಾಂತರ ಹೊಗುತ್ತಿದೆ.

      ಪ್ರತಿ ಶನಿವಾರ ಹಲಸಿನ ವಹಿವಾಟು ನೆಡೆಯುತ್ತದೆ. 20 ರೂ ಗಳಿಂದ 200 ರೂಗಳವರೆಗೆ ಹಲಸಿನಹಣ್ಣುಗಳು ಮಾರಟ ವಾಗುತ್ತದೆ. ಕೆಲವು ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಬದಲು ಈ ಬಾರಿಯ ಹಲಸಿನಹಣ್ಣುಗಳನ್ನು ತಮ್ಮ ಬಂಧುಗಳಿಗೆ.ಹಿತೈಷಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.ನೋಡಿ ಹೇಗಿದೆ ಈ ಕೊರೊನಾದ ಮಹಿಮೆ ಮಾವು ಮತ್ತು ಹಲಸು ಬೆಳೆದ ರೈತರ ಬಾಳು. ಒಂದು ಕಡೆ ಸರಿಯಾದ ಬೆಳೆಯಿಲ್ಲ ಇರುವ ಬೆಳೆಗೆ ಸರಿಯಾದ ಬೆಲೆಯು ಸಿಗುತ್ತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link