ಹಾನಗಲ್ಲ:

ಕೇಂದ್ರ ಸರಕಾರದ ಹೊಸ ಪೌರತ್ವ ತಿದ್ದುಪಡಿ ಕಾನೂನು ಮುಸಲ್ಮಾನರ ವಿರುದ್ಧ ಅಲ್ಲ ಎನ್ನುತ್ತ ದಲಿತರು ಹಿಂದುಳಿದವರನ್ನೂ ಸೇರಿಸಿ ಸದೆ ಬಡಿಯುವ ಹುನ್ನಾರದ ಕಾನೂನಾಗಿದ್ದು, ಎವಿಎಂ ಇರುವವರೆಗೆ ಮೋದಿ ಅಧಿಕಾರದಲ್ಲಿ ಇದ್ದೇ ಇರುತ್ತಾರೆ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕಿಡಿ ಕಾರಿದರು.
ಶನಿವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಸೈಯದ್ಸಾದತ್ ದರ್ಗಾ ಮೈದಾನ ಆವರಣದಲ್ಲಿ ಸಂವಿಧಾನ ರಕ್ಷಣ ಸಮಿತಿ ಆಯೋಜಿಸಿದ ಪೌರತ್ವ ತಿದ್ದುಪಡಿಯ ಸಿಎಎ, ಎನ್ಆರ್ಸಿ, ಎನ್ಪಿಆರ್ ನಿಯಮ ವಿರೋಧಿಸಿ ನಡೆಸಿದ ಪ್ರತಿಭನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಪಕಾರ ಮಾಡುವವರು ಮುಸಲ್ಮಾನರು. ಹಿಂದು ಮಸ್ಲಿಮರನ್ನು ಬೇರ್ಪಡಿಸುವ ಹುನ್ನಾರ ಬಿಜೆಪಿಯದ್ದಾಗಿದೆ.
ದೇಶದ ಜನರನ್ನು ದಾರಿ ತಪ್ಪಿಸುತ್ತಿರುವ ಅಮಿತ್ಷಾ ಹಾಗೂ ಮೋದಿಗೆ ಈ ದೇಶದ ಜನರ ಹಿತ ಬೇಕಾಗಿಲ್ಲ. 5 ಕೋಟಿ ಯುವಕರಿಗೆ ಉದ್ಯೋಗ ಕೊಡಲಾಗುತ್ತಿಲ್ಲ. ಗೋಹತ್ಯೆ ಫ್ಯಾಕ್ಟರಿ ನಡೆಸುತ್ತಿರುವವರು ಬಿಜೆಪಿಯವರು. ಬಿಎಸ್ಎನ್ಎಲ್, ರೈಲು ಇಲಾಖೆಗಳು ದಿವಾಳಿಯಗಿವೆ. ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಮತ ರಾಜಕಾರಣವನ್ನೇ ಮುಂದು ಮಾಡಿಕೊಂಡಿರು ಬಿಜೆಪಿಗೆ ಪಾಠ ಕಲಿಸಬೇಕು ಎಂದ ಅವರು, ಯಾರು ಹಿಂದು ಯಾರು ಮುಂದು ಎಂಬ ವಿಷಯದಲ್ಲಿ ಯಡಿಯೂರಪ್ಪ ಚುನಾವಣೆ ಗೆಲ್ಲುವತನಕ ಹಿಂದು, ಗೆದ್ದ ಮೇಲೆ ಇನ್ಯಾರೋ ಮುಂದು ಯಡಿಯೂರಪ್ಪ ಅವರ ಹಿಂದು ಎಂದು ಲೇವಡಿ ಮಾಡಿದರು.
ನ್ಯಾಯವಾದಿ ಸಾಹಿತಿ ವಿಜಯಕಾಂತ ಪಾಟಿಲ ಮಾತನಾಡಿ, ಸಿ.ಎಂ.ಇಬ್ರಾಹಿಂ ಬಸವಣ್ಣನವರೇ ಮೈಯಲ್ಲಿ ಬಂದಂತೆ ಬಸವ ತತ್ವ ಪ್ರತಿಪಾದಕರು. ಆರ್ಎಸ್ಎಸ್ ಕಛೇರಿ ಮುಂದೆ ರಾಷ್ಟ್ರಧ್ವಜ ಹಾರಿಸಲಾಗದ ಅವರಿಂದ ದೇಶಪ್ರೇಮ ಕಲಿಯಬೇಕಾಗಿಲ್ಲ.
ಸರಸಂಘಚಾಲಕರನ್ನು ಭ್ರಾಹ್ಮಣರ ಬದಲಾಗಿ ದಲಿತರನ್ನು ಮಾಡಲಿ. ಹತ್ಯೆಕೋರ ಸಂಸ್ಕøತಿಯ ಆರ್ಎಸ್ಎಸ್, ಬಿಜೆಪಿ, ವಿಎಚ್ಪಿ ಸಂಸ್ಕೃತಿ ನಮಗೆ ಬೇಕಾಗಿಲ್ಲ. ಮೋದಿ ಭಾರತೀಯರಿಗೆ ಭ್ರಮೆ ಹುಟ್ಟಿಸುತ್ತಿದ್ದಾರೆ. ಈಗ ಬಣ್ಣಗಳಿಗೂ ಜಾತಿ ಪಕ್ಷದ ಚಿನ್ಹೆ ಅಂಟಿಕೊಳ್ಳುತ್ತಿವೆ. ದೇಶದ ಇಂಥ ಸ್ಥಿತಿಯಲ್ಲಿ ಮಾತನಾಡಲಾರದ ರೀತಿಯಲ್ಲಿ ನರ ಸತ್ತಿವೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟೀಷರ ವಿರುದ್ಧ ಹೋರಾಡಿದೆವು. ಈಗಿರುವ ಬಿಜೆಪಿಯೂ ಬ್ರಿಟೀಷರ ಪಡಿಯಚ್ಚು. ಬಿಜೆಪಿ ಎಂದರೆ ಬ್ರಿಟೀಷ ಜನತಾ ಪಾರ್ಟಿ ಎಂದು ವಿಶ್ಲೇಷಿಸಿದ ಅವರು, ಪೌರತ್ವ ಕಾಯಿದೆ ತಿದ್ದುಪಡಿ ಡಾ.ಬಿ.ಆರ್.ಅಂಬೇಡ್ಕರ, ಮಹಾತ್ಮಾಗಾಂಧೀಜಿಯವರಿಗೆ ಮಾಡಿದ ಅವಪಮಾನ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ,ಪುರಸಭೆ ಮಾಜಿ ಅಧ್ಯಕ್ಷ ನಜೀರ ಸವಣೂರ, ರಾಜು ಗುಡಿ, ನಿಂಗಪ್ಪ ಪೂಜಾರ, ಯಾಸಿರ್ಖಾನ ಪಠಾಣ, ವಿಜಯಕುಮಾರ ದೊಡ್ಡಮನಿ, ಪ್ರಕಾಶಗೌಡ ಪಾಟೀಲ, ಆರ್.ಎಸ್.ಪಾಟೀಲ, ಪುಟ್ಟಪ್ಪ ನರೇಗಲ್ಲ, ಟಾಕನಗೌಡ ಪಾಟೀಲ, ಯಲ್ಲಪ್ಪ ಕಿತ್ತೂರ, ಸಯ್ಯದ್ಅಹಮ್ಮದಭಾಷಾ ಪೀರಜಾದೆ, ಎ.ಬಿ.ಇಬ್ರಾಹಿಂ ಸಕಾಫಿ, ಅಲ್ಹಾಜ ಮುಲ್ಲಾ, ಮತೀನ ಶಿರಬಡಗಿ, ನಿಂಗಪ್ಪ ಕಾಳೇರ, ಯಾಸಿರಅರಾಫತ್ ಮಕಾನದಾರ್, ಜಮೀರ ಶೇಖ್, ಮಖಬೂಲ ಸರ್ವಿಕೇರಿ, ಬಾಬಾಜಾನ ಕೊಂಡವಾಡಿ, ನಿಯಾಜ ಶೇಖ್, ಎಂ.ಎಂ.ಮುಲ್ಲಾ ಮೊದಲಾದವರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
