ಈ ಬಾರಿ ಹಂಪಿ ಉತ್ಸವ ಎರಡು ದಿನ ಮಾತ್ರ-ಬಿ.ಶ್ರೀರಾಮುಲು

ಬಳ್ಳಾರಿ

     ರಾಜ್ಯದಲ್ಲಿ ಈ ಬಾರಿ ವರುಣನ ಭೀಕರತೆಗೆ ಜನ-ಜಾನುವಾರುಗಳು ಸಾವಿಗೀಡಾಗಿದ್ದು, ಅನೇಕರು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಪ್ರಸಿದ್ಧ ಹಂಪಿ ಉತ್ಸವವನ್ನು ಕೇವಲ 2 ದಿನ ಮಾತ್ರ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

     ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೀತ, ಸಾಹಿತ್ಯ ಮತ್ತು ಕಲೆಗೆ ಪ್ರೇರಣೆಯಾದ ಹಂಪಿ ಉತ್ಸವವನ್ನು 3 ದಿನ ಆಚರಿಸುವ ಉದ್ದೇಶ ನಮಗೂ ಇತ್ತು. ಆದರೆ ರಾಜ್ಯದಲ್ಲಿ ರಣಭೀಕರ ಮಳೆಗೆ ಅನೇಕರು ಸಂತ್ರಸ್ಥರಾಗಿದ್ದಾರೆ. ರೈತರು, ಕೃಷಿ ಕಾರ್ಮಿಕರು ತೊಂದರೆಗೀಡಾಗಿದ್ದಾರೆ. ಜನರು ಮತ್ತು ಅನೇಕ ಜಾನುವಾರುಗಳು ಮರಣವಪ್ಪಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಲಾವಿದರನ್ನೂ ಕೈ ಬಿಡಬಾರದು ಎಂಬ ಉದ್ದೇಶದಿಂದ ಹಂಪಿ ಉತ್ಸವವನ್ನು ಕೇವಲ ಎರಡು ದಿನ ಮಾತ್ರ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link