ಸಾಧನೆಗೆ ಭಗೀರಥರ ಛಲ ಮುಖ್ಯ-ಶ್ರೀರಂಗಯ್ಯ.

ಕೊರಟಗೆರೆ

    ಜೀವನದಲ್ಲಿ ಏನನ್ನಾದರೂ ಸಾದಿಸಬೇಕಿದ್ದರೆ ಮಹರ್ಷಿ ಭಗೀರಥರ ಪ್ರಯತ್ನ ಅನುಸರಿಸಿದರೆ ತಕ್ಕ ಫಲಿತಾಂಶ ಸಿಗಲಿದ್ದು, ಭಗೀರಥ ಪ್ರಯತ್ನಕ್ಕೆ ಅಷ್ಟೊಂದು ಹಮತ್ವವಿದೆ ಎಂದು ಶಿರಸ್ದೇದಾರ್ ಶ್ರೀರಂಗಯ್ಯ ತಿಳಿಸಿದರು.

     ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಭಗೀರಥ ಉಪ್ಪಾರ ಸಂಘ ಏರ್ಪಡಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಹರ್ಷಿ ಭಗೀರಥರು ಅವಿರತ ತಪಸ್ಸು ಮಾಡಿ ಅನ್ನ ಅಹಾರಾದಿಗಳನ್ನು ತ್ಯಜಿಸಿ ಭೂಮಿಯನ್ನು ಪವಿತ್ರಗೊಳಿಸಲು ಎಷ್ಟೇ ಅಡೆ ತಡೆ ಎದುರಾದರೂ ಸಹ ಛಲಬಿಡದೇ ಗಂಗೆಯನ್ನು ಭೂವಿಗೆ ಕರೆತದಂದ ಮಹಾ ಪುರುಷರಾಗಿದ್ದಾರೆ ಎಂದ ಅವರು ಗಂಗೆ ಎಂದರೆ ನೀರು ಮನುಷ್ಯನಿಗೆ ನೀರಿನ ಮಹತ್ವ ಮೌಲ್ಯ ತಿಳಿದಿದ್ದರೂ ಇಂದು ನೀರು ಎಲ್ಲಡೆ ಕಲುಷಿತಗೊಳಿಸುತ್ತಿರುವುದು ದುರಂತವಾಗಿದೆ,

      ನೀರಿನ ಮಹತ್ವವನ್ನು ಎಲ್ಲರೂ ಮನಗಾಣಬೇಕು, ನೀರನ್ನು ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು. ತಾಲೂಕು ಭಗೀರಥ ಉಪ್ಪಾರ ಸಂಘದ ಅದ್ಯಕ್ಷ ನಾಗಣ್ಣ ಮಾತನಾಡಿ ಭಗೀರಥರ ಸಾಧನೆ, ಜೀವನ ಗಾಧೆ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳ ಬೇಕಾಗಿದೆ, ಯಾವುದೇ ವ್ಯಕ್ತಿಯು ಗುರಿ ಮುಟ್ಟಲು ಸಾಧನೆ ಭಗೀರಥನ ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು,

      ಅವರು ಯಾವುದೇ ಒಂಸು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ತಿಳಿಸಿದರು, ತಾಲೂಕು ಉಪ್ಪಾರಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಕಳೆದ 5 ವರ್ಷದ ಹಿಂದೆ ಸರ್ಕಾರದಿಂದ ನಿವೇಶನ ಕೋರಿ ಮನವಿ ಸಲ್ಲಿಸಲಾಗಿದ್ದು ಕಂದಾಯ ಇಲಾಖೆ ಆದಿಕಾರಿಗಳು ಪರಿಗಣಿಸಿ ಮಂಜೂರು ಮಾಡಬೇಕಾಗಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಚನ್ನವೀರಯ್ಯ, ನಕುಲ್, ಚಿಕ್ಕರಾಜು, ರೇವಣ್ಣ, ಉಪ್ಪಾರ ಸಮುದಾಯದ ನಾಗರಾಜು, ಕೀರ್ತಿರಾಜು, ದಾದಾಪೀರ್ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap