ಅವಿರೂಧ ಆಯ್ಕೆ ಸರ್ವರಿಗೂ ಮಾದರಿ : ಶಾಸಕ ಭೀಮಾನಾಯ್ಕ್

ಹಗರಿಬೊಮ್ಮನಹಳ್ಳಿ

    ಪ್ರಜಾಪ್ರಭುತ್ವ ವ್ಯೆವಸ್ಥೆಯಲ್ಲಿ ಕಾರ್ಯಾಂಗದ ಪಾತ್ರ ಮಹತ್ವದ್ದಾಗಿದೆ ಕಾರ್ಯಾಂಗದಲ್ಲಿ ಸರಕಾರಿ ನೌಕರರು ತಮ್ಮ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸದಾ ಒಗ್ಗಾಟ್ಟಗಿರುವುದು ನಮ್ಮ ಆಶಯ ಹಾಗೂ ಇಲ್ಲಿನ ತಾಲೂಕು ಸರಕಾರಿ ನೌಕರರು ಅವಿರೋಧವಾಗಿ ತಮ್ಮ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಸರ್ವರಿಗೂ ಮಾದರಿಯಾಗಿದೆ ಎಂದು ಶಾಸಕ ಭೀಮಾನಾಯ್ಕ್ ಹೇಳಿದರು.

     ಪಟ್ಟಣದ ಶಾಸಕರ ಕಛೇರಿಯಲ್ಲಿ ತಾಲೂಕು ಸರಕಾರಿ ನೌಕರರು ತಮ್ಮ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿರುವು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದರು.

        ಸರಕಾರಿ ನೌಕರರು ಒಕ್ಕೊಲಿನಿಂದ ಇರಬೇಕು ಹಾಗೂ ತಮ್ಮಲ್ಲಿನ ಗುಂಪುಗಾರಿಕೆಯು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ನೌಕರರ ಸಂಘದ ಪದಾಧಿಕಾರಿಗಳು ನೌಕರರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಫಂದಿಸಿ ಸಣಘಟನೆಯ ಬೆಳವಣಿಗೆಯಲ್ಲಿ ಹೆಚ್ಚು ಶ್ರಮ ವಹಿಸುವಂತೆ ಆಶಿಸಿದರು,ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃಧ್ಧಿಯಾಗಿದ್ದು ಮುಂದಿನ ದಿನಗಳಲ್ಲಿ ನೌಕರರು ಅಭಿವೃಧ್ಧಿಯಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.

       ಈ ಸಂಧರ್ಭದಲ್ಲಿ ನೂತನ ನೌಕರರ ಸಂಘಕ್ಕೆ ಆಯ್ಕೆಯಾದ ವಿವಿಧ ಇಲಾಖೆಯ ನಿದೇಶಕರು,ಎನ್.ಪಿ.ಎಸ್. ಸಂಘದ ಅಧ್ಯಕ್ಷ ಗೋಣಿಬಸಪ್ಪ, ಶಿಕ್ಷಕ ದೇವಪ್ಪ, ಪರಮೇಶ್ವರಯ್ಯ ಸೊಪ್ಪಿಮಠ್,ಮಹಾಂತೇಶ,ಗೂಳಪ್ಪ ಹುಲಿಮನಿ,ನಾಗರಾಜ್ ಯು.ಹೆಚ್.ಆಂಜನೇಯ ಎಸ್.ಮೋಹನ್ ಅಣಜಿ,ಅಂಜಿನಪ್ಪ ಎಸ್.ಎನ್.ಹಿರಿಯ ನಾಯಕ ಶಿವಲಿಂಗಸ್ವಾಮಿ ,ಸೋಮಶೇಖರ,ನಿಜಲಿಂಗಪ್ಪ, ಉಮೇಶ್, ವೀರೇಶ, ಹೊನ್ನಪ್ಪ,ರಾಮಕೃಷ್ಣ ಸೇರಿದಂತೆ ನೌಕರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap