ಅಮ್ಮನ ಕ್ಷೇತ್ರಕ್ಕೆ ವರುಣ್ ನಾಮಪತ್ರ ಸಲ್ಲಿಕೆ…!!

ಪಿಲಿಭಿತ್

        ಬಿಜೆಪಿ ಸಂಸದ ವರುಣ್ ಫಿರೋಜ್ ಗಾಂಧಿ ಇದುವರೆಗೆ ಅಮ್ಮ ಮನೇಕಾ ಪ್ರತಿನಿಧಿಸುತ್ತಿದ್ದ ಪಿಲಿಭಿತ್ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ ಬಿಜೆಪಿ ಈ ಬಾರಿ ತಾಯಿ ಮತ್ತು ಮಗನ ಕ್ಷೇತ್ರಗಳನ್ನು ಬದಲಾವಣೆ ಮಾಡಿದೆ ಈಗ ಮನೇಕಾ ಗಾಂಧಿ ಪುತ್ರ ವರುಣ್ ಇವರೆಗೆ ಪ್ರತಿನಿಧಿಸುತ್ತಿದ್ದ ಸುಲ್ತಾನ್ ಪುರದಿಂದ ಸ್ಪರ್ಧಿಸಲಿದ್ದಾರೆ.

         ನಾಮಪತ್ರ ಸಲ್ಲಿಸಿ ಮಾತನಾಡಿದ ವರುಣ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರದಲ್ಲಿ ದೇಶದ ಅಭಿವೃದ್ಧಿಯ ವೇಗ ಅಸಾಮಾನ್ಯವಾಗಿದೆ. ಸರಕಾರ, ಸಬ್ಕಾ ಸಾಥ್- ಸಬ್ಕಾ ವಿಕಾಸ್ (ಎಲ್ಲರ ಸಹಕಾರ ಎಲ್ಲರ ಅಭಿವೃದ್ಧಿ ) ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

         ತಾವು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೆ ಜನರಿಗೆ ತಿರಸ್ಕರಿಸುವ ಹಕ್ಕಿದೆ. ನಾನು ಪ್ರಧಾನಮಂತ್ರಿಯ ಸಿಪಾಯಿಯಾಗಿ ಬಂದಿದ್ದೇನೆ ಎಂದು ಅವರು ಹೇಳಿದರು.ಏಪ್ರಿಲ್ 23ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಯ ನಂತರ ವರುಣ್ ಮಾತಾ ಯಶ್ವಂತ್ರಿ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link