ರಾಣೆಬೆನ್ನೂರು:
ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ನವೋದಯ ಮಹಿಳಾ ಸಂಸ್ಥೆ ರಾಣೇಬೆನ್ನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 22.03.2019 ರಂದು ಬೆಳಿಗ್ಗೆ 11.30ಕ್ಕೆ ನೀಡ್ಸ್ ಕೇಂದ್ರ ಕಛೇರಿಯಲ್ಲಿ “ವಿಶ್ವ ಜಲ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಭೂಹಕ್ಕುದಾರರ ವೇದಿಕೆ ಅಧ್ಯಕ್ಷರು ಶ್ರೀ ರವೀಂದ್ರಗೌಡ ಪಾಟೀಲ ಇವರು ಮಾತನಾಡಿ ಮಾನವನಿಗೆ ಆಹಾರ ಎಷ್ಟು ಮುಖ್ಯವೋ ಅದರಂತೆ ನೀರು ಸಹ ಜೀವ ಜಲ ಇದರ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ಜಾಗೃತಿಯನ್ನು ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಚ್ ಎಫ್ ಅಕ್ಕಿ ಇವರು ಮಾತನಾಡುತ್ತಾ ಭೂಮಿಯ ಶೇ 71% ರಷ್ಟು ಭೂ ಭಾಗದಲ್ಲಿ ನೀರಿದ್ದರೂ ಮಾನವನ ಬಳಕೆಗೆ ಲಭ್ಯವಿರುವ ನೀರು ಶೇ 1% ರಷ್ಟು ಮಾತ್ರ. ಬಳಕೆಗೆ ಲಭ್ಯವಿರುವ ನೀರಿನ ಶೇ 1% ರಲ್ಲಿ ಶೇ 90% ಭಾಗ ಕೃಷಿಗೆ, ಶೇ 6% ರಷ್ಟು ಕೈಗಾರಿಕೆಗಳಿಗೆ, ಬಳಕೆಯಾಗುತ್ತಿದ್ದು ಕುಡಿಯುವುದಕ್ಕೆ ಶೇ 4% ರಷ್ಟು ಮಾತ್ರ ಲಭ್ಯವಿದೆ. ರಾಜ್ಯದ ಶೇ 85% ರಷ್ಟು ಗ್ರಾಮೀಣ ಜನತೆ ಕುಡಿಯಲು ಅಂತರ್ಜಲವನ್ನೇ ಅವಲಂಬಿಸಿದ್ದಾರೆ.
ಆದಕಾರಣ ನೀರು, ವಾಯು ಹಾಗೂ ಪರಿಸರ ಎನ್ನುವ ದೈವದತ್ತ ಕೊಡುಗೆಗಳನ್ನು ನಾವು ವಿನಾಶಗೊಳಿಸಬಾರದು. ಅವುಗಳ ಬಗ್ಗೆ ಅಲಕ್ಷತನವನ್ನು ಮಾಡದೆ ಇಂತಹ ಸಂಪನ್ಮೂಲಗಳ ಮಿತ ಬಳಕೆ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ನೀಡ್ಸ್ ಸಂಸ್ಥೆಯು ಜನರಲ್ಲಿ ನೀರು, ಮಣ್ಣು ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಹರನಗೌಡ ಪಾಟೀಲ್ ಪ್ರಗತಿ ಪರ ರೈತರು, ಶ್ರೀ ಸುಧೀರ ಇ ಟಿ, ಶ್ರೀ ಮಾಲತೇಶ ಹೊನ್ನಮ್ಮನವರ, ಶ್ರೀ ಕರಿಬಸಪ್ಪ ಎಮ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಜಿಲ್ಲಾ ಸಂಯೋಜಕರು, ಶ್ರೀಮತಿ ಸುನಿತಾ ಜಾಧವ್ ನವೋದಯ ಮಹಿಳಾ ಸಂಸ್ಥೆ ಅಧ್ಯಕ್ಷರು,ನೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಸೇರಿದಂತೆ45 ಜನ ಸದಸ್ಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
