ಹಾವೇರಿ :
ಹೊಸ ಪೀಳಿಗೆಗೆ ಸಂಘಟನೆಯ ಇತಿಹಾಸ ಪರಿಚಯಿಸಿ ಹೊಸ ಹೆಜ್ಜೆಗಳನ್ನು ಇಡುವದನ್ನು ಕಲಿಸಬೇಕು.ಅಸಂಘಟಿತ ಕಾರ್ಮಿಕರ ಬಗ್ಗೆಯೂ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ಕ.ವಿ.ಪ್ರ.ನಿ.ನೌಕರರ ಸಂಘದ ಬೆಂಗಳೂರ ಕಂಪನಿ ಉಪಾಧ್ಯಕ್ಷರಾದ ವಿಜಯಕುಮಾರ ಮುದಕಣ್ಣನವರ ಹೇಳಿದರು.
ಸಮುದಾಯ ಭವನದ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಗಳ ಅರ್ಪಿಸಿ, ಕ.ವಿ.ಪ್ರ.ನಿ.ನೌಕರರ ಸಂಘದ ಸ್ಥಳಿಯ ಸಮಿತಿ ಆಶ್ರಯದಲ್ಲಿ ದುಡಿಯುವ ವರ್ಗದ ಏಕತಾ ದಿನವಾದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕತೆಯಲ್ಲಿ ಹೊಸದಾಗಿ ನೇಮಕವಾಗುವ ಯುವಕರಿಗೆ ಸಂಘಟನೆಯ ಬಗ್ಗೆ ತಿಳುವಳಿಕೆ ನೀಡಿ ನಾವು ದುಡಿಯುವ ಸಂಸ್ಥೆಗೆ ನಿಷ್ಠೆ , ಪ್ರಮಾಣಿಕವಾಗಿ ಕೆಲಸ ಮಾಡುವಂತಾಗಬೇಕು ಎಂದರು.
ಅಧೀಕ್ಷಕ ಇಂಜನೀಯರ ಎಮ್.ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯುತ್ ಇಲಾಖೆಗೆ ಲೈನಮನ್ಗಳೆ ಜೀವ ಇದ್ದಂತೆ, ಶ್ರಮ ಜೀವಿಗಳ ವಿದ್ಯುತ್ ಇಲಾಖೆಯಲ್ಲಿ ಅಫಘಾತ ರಹಿತ ಕಾರ್ಯಗಳು ನಡೆಯಬೇಕು. ಸಾಮಾಜಿಕ ಕಳಕಳಿ ಮತ್ತು ಪ್ರತಿಯೋಬ್ಬರ ಸೇವೆಯನ್ನು ಗುರುತಿಸುವ ಗುಣ ಬೇಳೆದಾಗ ಕಾರ್ಮಿಕ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು ಮುಖ್ಯ ಅತಿಥಿ ಮುಖ್ಯಸ್ಥರು, ಕನ್ನಡ ವಿಭಾಗ ಸರಕಾರಿ ಮಹಾವಿದ್ಯಾಲಯ ಹುಬ್ಬಳ್ಳಿ ಡಾ. ವಾಯ್.ಎಮ್.ಭಜಂತ್ರಿ ರವರು ಇಂದಿನ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡುವ ಅಗತ್ಯತೆ ಹಿಂದಿಗಿಂತಲು ಹೆಚ್ಚಾಗಿದೆ. ಹೋರಾಟದ ಮೂಲಕ ಮಾತ್ರ ನಮ್ಮ ಗುರಿ ಸಾಧಿಸಬಹುದು. ಪಾದ ಪೂಜೆಯಿಂದ ಎಂದು ಹೊಟ್ಟೆ ತುಂಬುವದಿಲ್ಲ. ಶ್ರಮ ಜೀವಿಗಳ ಬೆವರಿನ ಹಿಂದೆ ಹೋರಾಟದ ಹಾದಿ ಇದೆ” ಎಂದರು.
ಇಲಾಖೆಗೆ ಅನನ್ಯ ಸೇವೆ ಸಲ್ಲಿಸಿದ ಐದು ಕಾರ್ಮಿಕರಾದ ಮೆಕ್ಯಾನಿಕ ಎಚ್.ಓ.ಪೇರೂರ, ಕಿರಿಯ ಇಂಜಿನೀಯರ ಬಿ.ಎಮ್.ಕಿತ್ತೂರ, ಚಾಲಕ ಎ.ಎಮ್ ಅಸನವಾಲೆ, ಸಹಾಯಕ ಎಚ್.ಎಸ್.ದೇವಗಿರಿ ಹಾಗೂ ವಿಶೇಷ ಎಂಬಂತೆ ಅಸಂಘಟಿತ ಕಾರ್ಮಿಕ ಪ್ರತಿನಿಧಿಯಾಗಿ ಶ್ರೀಮತಿ ರಾಣಿ ಅರ್ಜುನ ಮಚಗಾರ ಅವರುಗಳನ್ನು ಕೂಡಾ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ ಎಸ್.ಎನ್.ಕಾಯಕದ ದಂಪತಿಗಳನ್ನು ಹಾಗೂ ಅತೀ ಹೆಚ್ಚು ಕಂದಾಯ ಬಾಕಿ ವಸೂಲಾತಿ ಮಾಡಿದ ಮಂಜುನಾಥ ಬೂದಿಹಾಳ ಅವರುಗಳನ್ನು ಸನ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ, ಕಾರ್ಯನಿರ್ವಾಹಕ ಇಂಜನೀಯರುಗಳಾದ ಹೆಚ್.ರುದ್ರಣ್ಣ, ಅಧ್ಯಕ್ಷರಾದ ಎಮ್.ಎಸ್.ಕುಮ್ಮೂರ, ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎ.ಕೂಡಲಮಠ ಲೆಕ್ಕಾಧಿಕಾರಿ ಎಚ್.ಎಮ್.ಅಮಾನುಲ್ಲಾ, ಜಾಗ್ರತ ದಳದ ನಾಗರಾಜ ಸನ್ಮಾನಿತರ ಪರವಾಗಿ ಎಸ್.ಎನ್.ಕಾಯಕದ ಹಾಗೂ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು.
ವೇದಿಕೆಯಲ್ಲಿ ಲೆಕ್ಕಾಧಿಕಾರಿ ಶ್ರೀಮತಿ ಪುಷ್ಪಾ ಹೆಬ್ಬಾಳ, ಎಸ್.ಎಸ್ ಜಿಂಗಾಡೆ,ಸಿ.ಬಿ ಹೊಸಮನಿ, ಬಾಸು ಕಾಕಂಡಕಿ, ರಮೇಶ, ಎಚ್.ಎಸ್ ಬಸವರಾಜಯ್ಯ, ಸಿ.ವಿ.ಹೊಳೆಯಣ್ಣವರ,ಶಂಕರ ಕಾಳಶೆಟ್ಟಿ ಎಮ್.ಬಿ.ಮಿಶ್ರೀಕೋಟಿ, ಎಸ್.ವಿ ಕುಲಕರ್ಣಿ ಜೆ.ಎಸ್.ಕದರಮಂಡಲಗಿ, ಶಂಭು ಹಾವೇರಿ ಸಂತೋಷ ಲಮಾಣಿ ಎ.ಕೆ.ಯಮನೂರ ಬಸವರಾಜ ಕೋಟಿ. ಕೆ.ಎನ್.ಅಗಡಿ ಕಾರ್ಯವೃಂದದವರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
