ಸಿರುಗುಪ್ಪ:

ನಗರದ ಬಿ.ಜೆ.ಪಿ. ಕಛೇರಿಯಲ್ಲಿ ಮುಂದಿನ ಬೇಸಿಗೆ ಬೆಳಗೆ ನೀರು ಒದಗಿಸುವ ಕುರಿತು ಕುರಿತು ಐ.ಸಿ.ಸಿ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳ ಕುರಿತು ಶಾಸಕ ಎಂ.ಎಸ್.ಸೋಮಲಿಂಗಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಐ.ಸಿ.ಸಿ. ಸಭೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಬಳ್ಳಾರಿ ಕೊಪ್ಪಳ, ರಾಯಚೂರು ಭಾಗದ ಶಾಸಕರು, ಸಂಸದರು ಮುಂದಿನ ಬೇಸಿಗೆ ಬೆಳೆಗೆ ರೈತರ ಜಮೀನುಗಳಿಗೆ ತುಂಗಭದ್ರ ಜಲಾಶಯದಿಂದ ರಾಯಚೂರು ಬಲದಂಡೆ ಕಾಲುವೆಗೆ,
ಜಿಲ್ಲೆಯ ಮೇಲ್ಮಟ್ಟದ ಕಾಲುವೆಗಳ ಮೂಲಕ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗಳ ಮೂಲಕ ರೈತರ ಬೆಳೆಗೆ ತುಂಗಭದ್ರ ಜಲಾಶಯದಲ್ಲಿನ ನೀರಿನ ಲಭ್ಯತೆಗೆ ಅನುಗುಣವಾಗಿ ರೈತರು ಬೆಳೆದಿರುವ ಬೆಳೆಗೆ ಡಿ.15ರ ವರೆಗೆ ನೀರು ಬಿಡುವುದು ಹಾಗೂ ಬೇಸಿಗೆಯ ಬೆಳೆಗೆ ಜನವರಿ 01 ರಿಂದ ಏಪ್ರಿಲ್ 15ರವರೆಗೆ ನೀರು ಬಿಡುವಂತೆ ಹಾಗೂ ನದಿಗೆ 10ಟಿ.ಎಂ.ಸಿ. ನೀರು ಬಿಡುವಂತೆ ಮನವರಿಕೆ ಮಾಡಿಕೊಡಲಾಗಿದ್ದು, ಜಲಾಶಯದ ಇಂಜಿನಿಯರ್ ರಾಮಲಿಂಗಪ್ಪ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸ್ಪಂಧಿಸಿದ್ದಾರೆ.
ರೈತರಿಗೆ ಏಪ್ರಿಲ್ 15ರ ವರೆಗೂ ತುಂಗಭದ್ರ ಜಲಾಶಯದಿಂದ ರೈತರಿಗೆ ನೀರು ಬಿಡಲಾಗುವುದು, ರೈತರು ಆತಂಕಪಡುವ ಅಗತ್ಯವಿಲ್ಲ. ಕೆಲವರು ರಾಜಕೀಯ ಲಾಭಕ್ಕಾಗಿ ರೈತರಲ್ಲಿ ಗೊಂದಲ ಮೂಡಿಸಿ ಮುಂದಿನ ಬೆಳೆಗೆ ನೀರು ಬಿಡುತ್ತಿಲ್ಲವೆಂದು ಧರಣಿ ಹಾಗೂ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ.
ರೈತರ ವಿಷಯವಾಗಿ ರಾಜಕೀಯ ಮಾಡುವುದು ಸರಿಯಲ್ಲ, ನಮ್ಮ ಭಾಗದ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 6.515ಟಿ.ಎಂ.ಸಿ. ಬಲದಂಡೆ ಕೆಳಮಟ್ಟದ ಕಾಲುವೆಗೆ 6.715ಟಿ.ಎಂ.ಸಿ. ನೀರಿನ ಲಭ್ಯತೆ ಇದ್ದು, ಮಳೆ ಬರುತ್ತಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗೆ ನೀರಿನ ಅವಶ್ಯಕತೆ ಕಡಿಮೆ ಇದ್ದು, ಹೆಚ್ಚು ನೀರನ್ನು ಬಿಡುವುದರಿಂದ 1.250ಟಿ.ಎಂ.ಸಿ. ನೀರು ಆಂಧ್ರಪಾಲಾಗುತ್ತದೆ.
ಕಳೆದ 17-18 ನೇ ಸಾಲಿನಲ್ಲಿ 4.500ಟಿ.ಎಂ.ಸಿ. ನೀರಿನ ಲಭ್ಯತೆ ಇದ್ದಾಗ ಮಾರ್ಚ್ ಅಂತ್ಯದ ವರೆಗು ನೀರನ್ನು ಬಿಡಲಾಗಿದ್ದು, 19-20ನೇ ಸಾಲಿನಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ಏಪ್ರಿಲ್ 15ರ ವರೆಗೆ ನೀರು ಬಿಡುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಆರೋಗ್ಯ ಸಚಿವರಲ್ಲಿ ಮನವರಿಕೆ ಮಾಡಿಕೊಡಲಾಗಿದೆ.
ಆಂಧ್ರಕ್ಕೆ ಹೋಗುವ 8ಟಿ.ಎಂ.ಸಿ. ನೀರನ್ನು ಬಳಸಿಕೊಂಡು ಪ್ರತಿದಿನ 6500ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಹರಿಸಲಾಗುವುದು, ಹಾಗೂ ಆಂಧ್ರ ರಾಜ್ಯದ ಇಂಜಿನಿಯರ್ಗಳು ತಮ್ಮ ಕೋಟಾವನ್ನು ಏಪ್ರಿಲ್ ತಿಂಗಳ ಬೇಸಿಗೆ ಸಮಯದಲ್ಲಿ ಪಡೆದುಕೊಂಡಲ್ಲಿ ಎರಡೂ ರಾಜ್ಯಗಳ ರೈತರಿಗೂ ಅನುಕೂಲವಾಗುತ್ತದೆ ಎಂದು ಇಂಜಿನಿಯರ್ಗಳಿಗೆ ಕೋರಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
