ಚಿತ್ರದುರ್ಗ;
ದೇಶದಲ್ಲಿ ಇಂದು ದ್ವೇಷವನ್ನು ಸುಲಭವಾಗಿ ಮಾರಾಟ ಮಾಡಬಹುದು ಅದರ ಬದಲು ಪ್ರೀತಿ, ಸಹಬಾಳ್ವೆಯ ವಿಷಯ ಹರಡುವಂತಾಗಬೇಕು ಎಂದು ಚಿಕ್ಕಜಾಜೂರಿನ ಎಸ್ಜೆಎಂ ಕಾಲೇಜಿನ ಪ್ರಾಧ್ಯಾಪಕ ನಿಸ್ಸಾರ್ ಅಹಮದ್ ಹೇಳಿದರು.ನಗರದ ಹೊರವಲಯದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ಬಾಪೂಜಿ ಶಿಕ್ಷಣ ಮಹಾವಿದ್ಯಾಲ ಆಯೋಜಿಸಿದ ಹತ್ತು ಬೆಳದಿಂಗಳು ವಿಶೇಷ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರು ಜಾತಿಮತ, ಪಂತ, ಧರ್ಮವನ್ನು ಮೀರಿ ಸಮಾಜ ಕಟ್ಟಬೇಕು. ದೇಶದಲ್ಲಿ ಇಂದು ನಡೆಯುತ್ತಿರು ವಿದ್ಯಾಮಾನಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ತತ್ವ, ಸಿದ್ಧಾಂತ ಎಂಬ ಪದಗಳಿಗೆ ಅರ್ಥವೇ ಇಲ್ಲದಂತಾಗುತ್ತಿದೆ. ನಮಗೆ ಮನಸ್ಸು ಬೇಸೆಯುವ ಹಾಗೂ ದೇಶ ಕಟ್ಟುವ ಶಿಕ್ಷಕರು ಬೇಕಾಗಿದ್ದಾರೆ. ಶಿಕ್ಷಕರು ನಮ್ಮ ಸೈನಿಕರ ಹೋರಾಟದ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳಿಗೆ ಸರಿಯಾದ ದಾರಿ ತೋರಿಸಬೇಕು.
ಇಂದು ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳು ನಮಗಿಂತ ಹೆಚ್ಚಿಗೆ ತಿಳಿದುಕೊಂಡಿದ್ದಾರೆ ಹಾಗಾಗಿ ಶಿಕ್ಷಕರು ನಿರಂತರ ಅಧ್ಯಾಯನ ಮಾಡಬೇಕಿದೆ. ವಿದ್ಯಾರ್ಥಿಗಳ ಬಳಿ ಶಿಕ್ಷಕ ಒಂದು ಬಾರಿ ವಿಶ್ವಾಸ ಕಳೆದುಕೊಂಡರೆ ಜೀವಮಾನದಲ್ಲಿ ಅವರು ನಿಮ್ಮನ್ನು ನಂಬುವುದಿಲ್ಲ. ರಾಜಕಿಯ ನಾಯಕರು ಸುಳು ಹೇಳಿಬಹುದು ಆದರೆ ಶಿಕ್ಷಕರು ಎಂದಿಗೂ ಸುಳು ಹೇಳಬಾರದು. ಶಿಕ್ಷಕ ಸುಳು ಹೇಳಿದರೆ ಒಂದು ತಲೆಮಾರಿನ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿದಂತೆ ಆಗುತ್ತದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯುವಂತ ನಡುವಳಿಕೆ ಶಿಕ್ಷಕರಿಗೆ ಇರಬೇಕು. ದೇಶದಲ್ಲಿರುವ ಒಳ್ಳೆಯ ವಿಚಾರಗಳನ್ನು ಮಕ್ಕಳಿಗೆ ತಪುಪಿಸಬೇಕು ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯದ ಡೀನ್ ಡಾ.ಬಿ.ಸಿ.ಅನಂತರಾಮು ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣಬೇಕು ಆ ಕನಸು ನಿಮ್ಮ ನಿದ್ದೆ ಕೆಡಸುವಂತೆ ಆಗಿರಬೇಕು. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಸಾಸಲು ಸತತ ಪ್ರಯತ್ನ ಪಡಬೇಕು. ಶಿಕ್ಷಕ ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯವಿದೆ. ಶಿಕ್ಷಕರ ಕೈಯಲ್ಲಿ ಒಂದು ತಲೆಮಾರಿನ ಸಮಾಜ ಕಟ್ಟುವ ಶಕ್ತಿಯಿದೆ.
ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ, ಇಲ್ಲಿ ಸಿಗುವ ನೆಮ್ಮದಿ ಬೇರೆ ಯಾವ ಕೆಲಸದಲ್ಲೂ ಸಿಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕೆ ಇಳಿದು ಅವರ ಜೀವನ ಸುಧಾರಿಸುವ ಶಕ್ತಿ ಶಿಕ್ಷಕರಿಗೆ ಇದೇ. ಅಬ್ದುಲ್ ಕಲಾಂ, ಮಹಾತ್ಮ ಗಾಂ ಅಂತಹ ಮಹಾ ಪುರುಷರ ಜೀವನ ಚರಿತ್ರೆಯಿಂದ ಸ್ಪೂರ್ತಿ ಪಡೆದುಕೊಂಡು ಅವರ ಆದರ್ಶಗಳನ್ನು ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿದರು.
ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್. ಬಾಪೂಜಿ ದೂರಶಿಕ್ಷಣ ಕೇಂದ್ರದ ಸಂಯೋಜನಾಕಾರಿ ಎ.ಎಂ.ರುದ್ರಪ್ಪ, ಕೆ.ಎಂ.ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಜಂಬುನಾಥ ಹಾಗೂ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
