ರಾಜ್ಯದಲ್ಲಿ ಬಿಜೆಪಿ ಪಕ್ಷ 22 ಸ್ಥಾನಕ್ಕಿಂತ ಹೆಚ್ಚು ಸ್ಥಾನ: ಬಿ ಎಸ್ ವೈ

ಹಾವೇರಿ :

      ರಾಜ್ಯದಲ್ಲಿ ಬಿಜೆಪಿ ಪಕ್ಷ 22 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆದ್ದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ ನಾಮಪತ್ರ ಸಲ್ಲಿಕೆ ನಿಮಿತ್ಯ ಆಯೋಜಿಸದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

       2014 ರ ಚುನಾವಣೆಗಿಂತ ನರೇಂದ್ರ ಮೋದಿ ಹವಾ ಹೆಚ್ಚಾಗಿದೆ. ಭ್ರಷಾಚಾರ ಆಡಳಿತ ನೀಡಿ, ದೇಶದ ಆರ್ಥಿಕ ಪರಸ್ಥಿತಿಯನ್ನು ಸುಧಾರಿಸಿದ್ದಾರೆ. ದೇಶದ ರಕ್ಷಣೆ ಹಾಗೂ ಘನತೆ ಗೌರವವನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ. ಕಳೆದ ಎರಡು ಬಾರಿ ಗೆಲ್ಲಿಸಿ ಈಗ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಉತ್ತಮ ಕೆಲಸಗಳನ್ನು ಮಾಡಿ ಮತ್ತೆ ಕಣದಲ್ಲಿ ಇದ್ದಾರೆ.

      ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹಾವೇರಿಯಿಂದ ಶಿವಕುಮಾರ ಉದಾಸಿಯವರನ್ನು ಗೆಲ್ಲಿಸಬೇಕು. ಕೇಂದ್ರ ಸರ್ಕಾರ ಹಾಗೂ ಕಳೆದ ಅವಧಿಯಲ್ಲಿ ರಾಜ್ಯ ಸರ್ಕಾರ ಜನರಿಗೆ ನೀಡಿದ ಉತ್ತಮ ಯೋಜನೆಗಳನ್ನು ಮನೆ ಮನೆಗಳಿಗೆ ಹೋಗಿ ತಿಳಿಸುವ ಕೆಲಸವನ್ನು ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಾಗಿದೆ.

        ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಶಿವಕುಮಾರ ಉದಾಸಿ ಗೆಲ್ಲಿಸಲೆಬೇಕು.ಹಗಲಿರುಳು ಶ್ರಮವಹಿಸಿ ಜಯಶಾಲಿಯಾಗಿ ಮಾಡಲು ಎಲ್ಲರೂ ಬದ್ದರಾಗಬೇಕಾಗಿದೆ ಎಂದು ಬಿಎಸ್‍ವೈ ಕರೆ ನೀಡಿದರು.

ಹಗಲು ದರೋಡೆ ಸರ್ಕಾರ :

        ರಾಜ್ಯದಲ್ಲಿ ಸಮಿಶ್ರ ಸರ್ಕಾರ ಜನರ ದುಡ್ಡನ್ನು ಹಗಲು ದರೋಡೆ ಮಾಡುತ್ತಿದೆ. ಕಮೀಷನಗಾಗಿ ಕಾಮಗಾರಿ ಮುಗಿಯುವ ಮುಂಚೆ ದುಡ್ಡು ಕೊಡುವುದಾ ? ಸಿಎಂ ಕುಮಾರಸ್ವಾಮಿಯವರು ಏನು ಮಾಡುತ್ತಿದ್ದಾರೆ ? ಲೋಕಸಭಾ ಫಲಿತಾಂಶದ ನಂತರ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬರುವುದು ನಿಶ್ಚಿತ ಎಂದು ಬಿಎಸ್‍ವೈ ವಿಶ್ವಾಸ ವ್ಯಕ್ತಪಡಿಸಿದರು.

      ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ಭ್ರಷ್ಟಾಚಾರ ಆಡಳಿತಕ್ಕೆ ತಿಲಾಂಜಲಿ ಹೇಳಿ ಸ್ವಚ್ಚ ಆಡಳಿತಕ್ಕೆ ಮುಂದಾದರು. ನಾನು ನಿಮ್ಮೆಲ್ಲರ ಆರ್ಶಿವಾದದಿಂದ 10 ವರ್ಷ ಸಂಸದನಾಗಿ ಜವಾಬ್ದಾರಿಯುತವಾಗಿ ಹಾಗೂ ಪ್ರಮಾಣಿಕತೆಯಿಂದ ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡಿದ್ದೇನೆ. ನಿಮ್ಮೆಲ್ಲರ ಆರ್ಶಿವಾದದಿಂದ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ನನಗೆ ಹೆಚ್ಚಿನ ಮತ ನೀಡುವ ವಿಶ್ವಾಸವಿದೆ.

       ಚುನಾವಣೆಯಲ್ಲಿ ಜಯಶಾಲಿಯಾಗಲು ತಮ್ಮೆಲ್ಲರ ಸಹಕಾರ ಮುಖ್ಯ ಎಂದು ವಿನಂತಿಸಿಕೊಂಡರು. ಮಾಜಿ ಸಚಿವ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮಹತ್ವ ನೀಡಿ ದೇಶದ ರಕ್ಷಣೆ ಹಾಗೂ ವಿಶ್ವ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. ಮಹದಾಯಿ ವಿಚಾರದಲ್ಲಿ ಕಾಂಗ್ರೇಸ್ ಪಕ್ಷವೆ ಧ್ವಂಧ್ವ ನಿಲವು ಹೊಂದಿದೆ. ಉತ್ತರ ಕರ್ನಾಟಕವನ್ನು ಸಮಿಶ್ರ ಸರ್ಕಾರ ನಿರ್ಲಕ್ಷೆತೆ ತಾಳುತ್ತಿದೆ. ಈಲೋಕಸಭಾ ಚುನಾವಣೆ ದೇಶದ ಭವಿಷ್ಯದ ನಿರ್ಮಾಣಕ್ಕೆ ಸಂಬಂಧಿಸಿದ್ದು.

        ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಶಿವಕುಮಾರ ಉದಾಸಿಯವರನ್ನು ಹೆಚ್ಚು ಮತಗಳಿಂದ ಜಯಶಾಲಿಯಾಗಿ ಮಾಡಬೇಕಾಗಿದೆ. ಸುಭದ್ರ ರಾಷ್ಟ ನಿರ್ಮಾಣಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು. ಸಭಾ ಕಾರ್ಯಕ್ರಮದಲ್ಲಿ ಶಾಸಕ ನೆಹರೂ ಓಲೇಕಾರ.ರಾಮಣ್ಣ ಲಮಾಣಿ.ವೀರುಪಾಕ್ಷಪ್ಪ ಬಳ್ಳಾರಿ.

       ಸಿಎಂ ಉದಾಸಿ ಮುಖಂಡರಾದ ಯುಬಿ ಬಣಕಾರ.ಸುರೇಶಗೌಡ ಪಾಟೀಲ.ಮಂಜುನಾಥ ಕುನ್ನೂರ ಅನಿಲ ಮೆಣಿಸಿನಕಾಯಿ ಸೇರಿದಂತೆ ಅನೇಕರು ಕೇಂದ್ರ ಸರ್ಕಾರದ ಜನಪರ ಕೆಲಸಗಳನ್ನು ತಿಳಿಸಿ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚು ಮತ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂದಲು ಅಪಾರ ಜನಸ್ತೋಮದೊಂದಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಮುಖಂಡರು ನಗರದ ಪುರುಸಿದ್ದೇಶ್ವರ ದೇವಸ್ಥಾನದಿಂದ ಮೆರವಣೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂಎಲ್‍ಸಿ ಎಸ್ ವ್ಹಿ ಸಂಕನೂರ,ಸಿದ್ದರಾಜ ಕಲಕೋಟಿ.ಮುತ್ತಣ್ಣ ಎಲಿಗಾರ.ಭಾರತಿ ಜಂಬಗಿ ಸೇರಿದಂತೆ ಬಿಜೆಪಿ ಪಕ್ಷದ ಗದಗ,ಹಾವೇರಿ ಜಿಲ್ಲಾ ಮುಖಂಡರು ಹಾಗೂ ಅಪಾರ ಕಾರ್ಯಕರ್ತರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link