ಬೆಂಗಳೂರು
ಕುಡಿದ ಅಮಲಿನಲ್ಲಿ ರಂಪಾಟ ಮಾಡುತ್ತಿದ್ದಾಗ ಠಾಣೆಗೆ ಕರೆತಂದ ಯುವತಿಯೊಬ್ಬಳು ಪೊಲೀಸರ ಮೇಲೆಯೇ ಲೈಂಗಿಕ ಆರೋಪ ಮಾಡಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲ ನಿವಾಸಿ ಅಪೇಕ್ಷಾ (ಹೆಸರು ಬದಲಾಯಿಸಲಾಗಿದೆ). ಅಪೇಕ್ಷಾ ಪೊಲೀಸರ ಮೇಲೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ಕಳೆದ ಏ.6ರಂದು ಅಪೇಕ್ಷಾ ತನ್ನ ಸ್ನೇಹಿತೆ ಜೊತೆ ಕೋರಮಂಗಲದಲ್ಲಿರೋ ಬೋಹೋ ಪಬ್ಗೆ ತೆರಳಿದ್ದರು. ಪಾರ್ಟಿ ಮುಗಿಸಿ ವಾಪಸ್ ಸಹ ಆಗಿದ್ದರು.
ಆದರೆ ಮತ್ತದೇ ಪಬ್ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಬಿಡಿ ಅಂತ ಕೇಳಿದ್ದಾಳೆ. ಅಷ್ಟೊತ್ತಿಗೆ ಪಬ್ ಕ್ಲೋಸ್ ಆಗಿತ್ತು. ಕೋಪಗೊಂಡ ಅಪೇಕ್ಷಾ ಏಕಾಏಕಿ ಸಿಬ್ಬಂದಿ ಜೊತೆ ಜಗಳ ಮಾಡಿ, ಹೊರಗಡೆ ಇಟ್ಟಿದ್ದ ಹೂವಿನ ಪಾಟ್ಗಳನ್ನ ಡ್ಯಾಮೇಜ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಶೆಟರ್ ನ್ನ ಮುರಿಯೋದಕ್ಕೆ ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಕೆಲಸಗಾರರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಆಗ್ನೇಯ ವಿಭಾಗ ಡಿಸಿಪಿ ಇಷಾಪಂತ್ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಆಕೆ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ನಂತರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಮನೆಗೆ ಕಳುಹಿಸಿದ್ದರು. ಆದರೆ ಯುವತಿ ಮಾತ್ರ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನ ಮುರಿದು ಹಾಕಿದ್ದಾರೆ ಅಂತ ಫೇಸ್ಬುಕ್ನಲ್ಲಿ ರಾಷ್ಟ್ರಪತಿ ಸೇರಿದಂತೆ ಬೆಂಗಳೂರು ಸಿಟಿ ಪೆÇಲೀಸರಿಗೆ ಟ್ಯಾಗ್ ಮಾಡಿದ್ದಾರೆ ಎಂದು ನಡೆದ ಘಟನೆ ಬಗ್ಗೆ ಡಿಸಿಪಿ ಅವರು ತಿಳಿಸಿದ್ದಾರೆ.ಸದ್ಯಕ್ಕೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದು ಬುದ್ದಿ ಹೇಳಿ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
