ಜಗತ್ತನ್ನು ಆಳುತ್ತಿರುವುದು ವಿಚಾರಗಳೇ ವಿನಹ ಧರ್ಮಗಳಲ್ಲ: ಶ್ರೀ ಶಿವಮೂರ್ತಿ ಶರಣರು

ಹುಳಿಯಾರು:

     ಜಗತ್ತನ್ನು ಆಳುತ್ತಿರುವುದು ವಿಚಾರಗಳೇ ವಿನಹ ಧರ್ಮಗಳಲ್ಲ. ಇದಕ್ಕೆ ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವುದು ನಿದರ್ಶನವಾಗಿದೆ. ಈ ನಿಟ್ಟಿನಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ವಿಚಾರಗಳ ಕಡೆ ಮನುಷ್ಯ ಮುಖ ಮಾಡಬೇಕಿದೆ ಎಂದು ಚಿತ್ರದುರ್ಗ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಶರಣರು ಅಭಿಪ್ರಾಯಪಟ್ಟರು.

    ಹುಳಿಯಾರಿನ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಬೆಂಗಳೂರಿನ ರಂಗಪಂಚಮಿಯಿಂದ ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್, ತಂಜಾವೂರು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಿದ್ದ ಜನಪರ ಸಂಸ್ಕೃತಿ ಉತ್ಸವ-2019 ರ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಕಲೆ, ಸಾಹಿತ್ಯ, ನಾಟಕಗಳು ಜನರನ್ನು ವೈಚಾರಿಕತೆಯ ಕಡೆಗೆ ಕರೆದೊಯ್ಯುವ ಪ್ರಮುಖ ಸಾಧನವಾಗಿದೆ. ಮನುಷ್ಯನಲ್ಲಿ ಹೃದಯವಂತಿಕೆ, ಮಾನವೀಯ ಗುಣ ಬೆಳೆಸುವ ಶಕ್ತಿ ಇವುಗಳಲ್ಲಿದೆ. ಹಾಗಾಗಿ ಪ್ರತಿಯೊಬ್ಬರೂ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಉತ್ತಮ. ಇದು ಸಾಧ್ಯವಾಗದಿದ್ದರೆ ನೋಡುವ ಹವ್ಯಾಸವನ್ನಾದರೂ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

     ಇಂದು ಹಳ್ಳಿಗರು ಎಲ್ಲದಕ್ಕೂ ಬೆಂಗಳೂರನ್ನು ಆಶ್ರಯಿಸಿದ್ದಾರೆ. ಕೊಳ್ಳಲು, ಮಾರಲು, ಓದಲು, ವಾಸಿಸಲು ಬೆಂಗಳೂರು ಸೂಕ್ತ ಎನ್ನುವ ಭ್ರಮೆಯಲ್ಲಿದ್ದಾರೆ. ಇವರನ್ನು ಈಗ ಮತ್ತೆ ಹಳ್ಳಿಗಳ ಕಡೆಗೆ ಕರೆತರುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದ ನಾಟಕೋತ್ಸವವು ಹಳ್ಳಿಗಳ ಕಡೆ ಮುಖಮಾಡುತ್ತಿರು ವುದು ಸ್ವಾಗತಾರ್ಹ ಬೆಳವಣಿಗೆ. ಈ ಮೂಲಕ ಹಳ್ಳಿಗಳು ಸಾಂಸ್ಕøತಿಕವಾಗಿ ಬೆಳೆದು ಹಳ್ಳಿಗರು ಬೆಂಗಳೂರು ಬಿಟ್ಟು ಹಳ್ಳಿಗಳ ಕಡೆ ಮುಖ ಮಾಡಲಿ ಎಂದು ಆಶಿಸಿದರು.

     ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಎಚ್.ಆರ್.ಸ್ವಾಮಿ ಉದ್ಘಾಟಿಸಿದರು. ಶ್ರೀಮಾತಾ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ರಂಗಪಂಚಮಿಯ ಸಂಸ್ಥಾಪಕ ಕಾರ್ಯದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ, ತಂಜಾವೂರು ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಜಗನ್ನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link