ಯಡಿಯೂರಪ್ಪನವರೇ ಆಪರೇಷನ್ ಕಮಲದ ಪಿತಾಮಹ : ಸಿದ್ದರಾಮಯ್ಯ

ರಾಣೇಬೆನ್ನೂರು

     ಈ ಉಪಚುನಾವಣೆ ಬಂದದ್ದು ಜನರ ತಿರ್ಮಾನದಿಂದಲ್ಲ ಅದು ಯಡಿಯೂರಪ್ಪನವರ ಅಧಿಕಾರದ ದಾಹದಿಂದ. ಅವರೇ ಅಪರೇಷನ್ ಕಮಲದ ಪಿತಾಮಹ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದರು.

    ಸ್ಥಳೀಯ ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಪಕ್ಷದಿಂದ ಗೆದ್ದವರನ್ನು ತಮ್ಮೆಡೆ ಹಣದ ಆಮಿಷ ಒಡ್ಡಿ ಪಕ್ಷಾಂತರ ಮಾಡುವುದು ಕಾನೂನು ಬಾಹಿರವಾಗಿದ್ದು ಅದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು ಇದಕ್ಕೆಲ್ಲಾ ಸಿಎಂ ಯಡಿಯೂರಪ್ಪ, ಅಮಿತ್ ಷಾ, ಪ್ರಧಾನಿ ಮೋದಿಜಿಯವರೇ ಕಾರಣರು ಎಂದು ನೇರವಾಗಿ ಆರೋಪಿಸಿದರು.
ಇಂದಿನ ದಿನಗಳಲ್ಲಿ ಪಕ್ಷಾಂತರ ಮಾಡುತ್ತಾ ರಾಜಕಾರಣ ಮಾಡುವ ಆಯಾರಾಮ-ಗಯಾರಾಮ ನಂತವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದ್ದು ಅದೊಂದು ಅಂಟು ರೋಗ. ಪಕ್ಷಕ್ಕೆ ದ್ರೋಹ ಬಗೆದವರನ್ನು, ಮತದಾರ ಆಶಯಗಳನ್ನು ಈಡೇರಿಸದವರನ್ನು ನಿವೆಂದೂ ಇನ್ನೊಮ್ಮೆ ವಿಧಾನಸಭೆಗೆ ಚುನಾಯಿಸಿ ಕಳಿಸಬಾರದು.

     ಈ ಕ್ಷೇತ್ರದಲ್ಲಿ ಕಳೆದ ಬಾರಿ ಚುನಾಯಿಸಿದ ಆರ್. ಶಂಕರ್ ನಡೆ ಕಾನೂನು ಬಾಹಿರವಾಗಿದ್ದು ಅವರನ್ನು ನಂಬಿ ಎರಡು ಬಾರಿ ಮಂತ್ರಿಸ್ಥಾನ ನೀಡಿದರೂ ನನ್ನ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಸೋಲಿನ ಭಯದಿಂದ ಈ ಬಾರಿ ಟಿಕೆಟ್ ವಂಚಿತರಾದ ಶಂಕರ್ ಅವರದ್ದು ಕೈ-ಬಾಯಿ ಶುದ್ಧವಿಲ್ಲಾ. ಈ ಕ್ಷೇತ್ರದ ಅಭಿವೃದ್ಧಿಯನ್ನು ಯಾವತ್ತೂ ಬಯಸದ ಅವರು ಕೇವಲ ಅಧಿಕಾರ, ಹಣದ ಆಮೀಷಕ್ಕೆ ಬಲಿಯಾಗಿ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಂಡ ಅವರನ್ನು ಈ ಕ್ಷೇತ್ರದ ಜನತೆ ಈಗಾಗಲೇ ತಿರಸ್ಕರಿಸಿದ್ದಾರೆ.

     ಇಂತಹ ರಾಜಕಾರಣಿಗಳು ರಾಜಕಾರಣದಲ್ಲಿ ಮುಂದುವರೆಯಲು ಅರ್ಹರೇ? ಎಂದು ವ್ಯಂಗ್ಯವಾಗಿ ನುಡಿದರು. ಆದ್ದರಿಂದ ಪ್ರಭುದ್ಧ ಮತದಾರರು ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಬಿ.ಕೋಳಿವಾಡರಿಗೆ ಮತ ನೀಡುವ ಮೂಲಕ 50 ಸಾವಿರ ಮತಗಳ ಪ್ರಚಂಡ ಬಹುಮತದಿಂದ ಗೆಲ್ಲಿಸÀಬೇಕೆಂದರು.

    ಸಿಎಂ ಯಡಿಯೂರಪ್ಪನವರದ್ದು ಅವಕಾಶವಾದಿ ರಾಜಕಾರಣ ಅವರಿಂದ ಸಾಧನೆ ಮಾತ್ರ ಶೂನ್ಯ. ಅವರು ನೀಡಿದ ಯಾವ ಭರವಸೆಗಳನ್ನು ಇಲ್ಲಿಯವರಿಗೂ ಈಡೇರಿಸಲಾಗಿಲ್ಲ. ಕಾಂಗ್ರೇಸ್ ನೀಡಿದ ಅನ್ನಭಾಗ್ಯವನ್ನು 7 ಕೆ.ಜಿ ಇದ್ದದ್ದನ್ನು 4 ಕೆ.ಜಿಗೆ ಮೊಟಕುಗೊಳಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಪ್ರವೃತ್ತಿಯನ್ನು ಕೈಬಿಡಿ. ಸರ್ಕಾರ ನಡೆಸುವ ತಾಕತ್ತು ನಿಮ್ಮಲ್ಲಿಲ್ಲದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ತೆರಳಿ ಎಂದು ಖಾರವಾಗಿ ನುಡಿದರು.

     ಕಳೆದ 5 ವರ್ಷದ ಕಾಂಗ್ರೇಸ್ ಸರ್ಕಾರದಲ್ಲಿ ಅನ್ನಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಶ್ಯೂಭಾಗ್ಯ, ಶಾದಿಭಾಗ್ಯ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದಂತಹ 165 ಭರವಸೆಗಳನ್ನು ಈಡೇರಿಸಿದ್ದು, ಈ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸ ವ್ಯಕ್ತ ಪಡಿಸಿದ ಅವರು ಇಂತಹ ಭರವಸೆಗಳನ್ನು ಈಡೇರಿಸಲು ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಸಿದ್ಧರಾಮಯ್ಯ ನುಡಿದರು.

     ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ್ ನಾಯಕ ಎಸ್.ಆರ್.ಪಾಟೀಲ, ಎಚ್.ಆಂಜನೇಯ, ಎಸ್.ಎಸ್. ಹಿಂಡಸಗೇರಿ, ಬಸವರಾಜ ಶಿವಣ್ಣನವರ, ಜಲಜಾ ನಾಯಕ, ಎಸ್.ರಾಮಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ರುದ್ರಪ್ಪ ಲಮಾಣಿ, ಐ.ಜಿ.ಸನದಿ, ಸಿ.ಎಸ್.ನಾಡಗೌಡ್ರ, ಪ್ರಕಾಶ ಕೋಳಿವಾಡ, ಬಿ.ಆರ್.ಯಾವಗಲ್, ಕುಸುಮಾ ಶಿವಳ್ಳಿ, ಬಸವನಗೌಡ ಮರದ, ಏಕನಾಥ ಭಾನುವಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಶೇರುಖಾನ ಕಾಬೂಲಿ, ನ್ಯಾಯವಾದಿ ಏಕಾಂತ ಮುದಿಗೌಡ್ರ, ನಾಗರಾಜ ಕುಡಪಲಿ, ತಿರುಪತಿ ಅಜ್ಜನವರ, ಕೆಎಂಪಿ ಮಣಿ, ಶಶಿಧರ ಬಸೇನಾಯಕ, ಸಣ್ಣತಮ್ಮಪ್ಪ ಬಾರ್ಕಿ, ರವೀಂದ್ರಗೌಡ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link