ಕೊರ್ಲಗುಂದಿ ಗ್ರಾಪಂ ರಾಜೀವ್ ಗಾಂಧಿ ಸೇವಾಕೇಂದ್ರದ ಭೂಮಿ ಪೂಜೆ

ಬಳ್ಳಾರಿ
 
        ಬಳ್ಳಾರಿ ಜಿಲ್ಲೆಯ ಮನರೇಗಾ ಕಾಮಗಾರಿಗಳ ಗುರುವಾರ ಪರಿಶೀಲನೆಯ ಕ್ಷೇತ್ರ ಭೇಟಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅವರು ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಪಂನಲ್ಲಿ ನಿರ್ಮಿಸಲು ಉದ್ದೇಶಿಸಿದ ರಾಜೀವಗಾಂಧಿ ಸೇವಾಕೇಂದ್ರ ಮತ್ತು ಸಂಜೀವಿನಿ ಸ್ತ್ರೀ-ಶಕ್ತಿ ಸಂಘಗಳ ವರ್ಕ್ ಶೆಡ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
 
       ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ.ಕೆ.ವಿ ಅವರು ಮಾನ್ಯ ಸಚಿವರಿಗೆ ಈ ಆರ್ಥಿಕ ವರ್ಷದಲ್ಲಿ ಮನರೇಗಾ ಯೋಜನೆಯಡಿ 16 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ರಾಜೀವಗಾಂಧಿ ಸೇವಾಕೇಂದ್ರ 14ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಸಂಜೀವಿನಿ ಸ್ತ್ರೀ ಶಕ್ತಿಗುಂಪಿನ ಮಹಿಳೆಯರಿಗಾಗಿ ವರ್ಕ್ ಶೆಡ್ ನಿರ್ಮಿಸಲು ಉದ್ದೇಶಿಸಿಲಾಗಿರುವುದನ್ನು ತಿಳಿಸಿದರು.
         ಕಂಪ್ಲಿ ಶಾಸಕರಾದ ಗಣೇಶ, ಜಿಪಂ ಅಧ್ಯಕ್ಷರಾದ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷರಾದ ದೀನಾ ಮಂಜುನಾಥ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ.ರಾಜೇಂದ್ರ ಕೆ. ವಿ, ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದ ಕೆಂಪೇಗೌಡ, ಸಚಿವರ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ, ಗ್ರಾಪಂ ಅಧ್ಯಕ್ಷರು, ಸದಸ್ಯರುಗಳು, ತಾಪಂ ಸದಸ್ಯರುಗಳು ಸೇರಿದಂತೆ ಜಿಪಂ ಅಭಿವೃದ್ಧಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಬಳ್ಳಾರಿ ತಾಪಂ ಇಒ ಜಾನಕಿರಾಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ, ಗ್ರಾಮಸ್ಥರು ಇದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link