ಬೆಂಗಳೂರು
ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಹಣಕಾಸು ವಹಿವಾಟು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ ಸಾಮಾನ್ಯರಿಗೆ ಸುಲಭವಾಗಿ ಸಾಧ್ಯಾಗುತ್ತಿಲ್ಲ ಎಂದು ಬೆಂಗಳೂರಿನ ಐಎಸ್ಇಸಿ ನಿವೃತ್ತ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾನೂನುಗಳು ಬದಲಾಗುತ್ತಿದ್ದು ಹಣ ಪಾವತಿಸುವುದು ಪಡೆಯುವುದು ಸೇರಿ ವಹಿವಾಟು ಪ್ರಕ್ರಿಯೆಯಲ್ಲಿ ಜನ ಸಾಮಾನ್ಯರು ಭಾಗಿಯಾಗುವುದು ಕಷ್ಟಕರವಾಗುತ್ತದೆ ಎಂದರು.
ಮಲ್ಲೇಶ್ವರದ ಆರ್ ಆರ್ ಸಭಾಂಗಣದಲ್ಲಿ ಮಲ್ಲೇಶ್ವರ ಲೇಡೀಸ್ ಅಸೋಸಿಯೇಷನ್ ಆಯೋಜಿಸಿದ್ದ, ಹಣಕಾಸು-ಬ್ಯಾಂಕಿಂಗ್ ಸವಾಲುಗಳು ಹಾಗೂ ಸಮಕಾಲೀನ ವಿಷಯಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ಅವರು ಅರ್ಥಶಾಸ್ತ್ರವನ್ನು ಸಂಶೋಧನೆಯ ರೀತಿಯಲ್ಲಿ ಹಣಕಾಸು-ಬ್ಯಾಂಕಿಂಕ್ನ್ನು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಮನುಷ್ಯ ಹುಟ್ಟಿನಿಂದ ಕೊನೆಯವರೆಗೂ ಹಣದ ಅವಶ್ಯಕತೆ ಬೇಕೆ ಬೇಕು. ಹಾಗಾಗೆಯೇ ಬ್ಯಾಂಕ್ಗಳ ನಿರ್ಮಾಣ ವಾಗಿದೆ, ಜನರು ಹೆಚ್ಚಾಗಿ ಬ್ಯಾಂಕ್ಗಳಲ್ಲೇ ವ್ಯವಹಾರ ಮಾಡಬೇಕು,ಆದರೆ ಅವರಿಗೆ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ತಿಳಿಯುವುದಿಲ್ಲ. ಅಷ್ಟೇ ಅಲ್ಲದೆ, ನನ್ನ ಪತ್ನಿ ನನಗೆ ಬ್ಯಾಂಕ್ ಕಡೆ ಕಳುಹಿಸುವುದಿಲ್ಲ.ಏಕೆಂದರೆ, ಆಕೆಗೆ ನನ್ನ ಮೇಲೆ ಭಯ. ಇನ್ನೂ, ನಾನು ಬ್ಯಾಂಕ್ ಅರ್ಜಿಗಳನ್ನು ತುಂಬಿಸುವುದಿಲ್ಲ. ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಗೊತ್ತಿಲ್ಲ ಎನ್ನುತ್ತಾಳೆ. ಇದಕ್ಕೆಲ್ಲಾ, ಹೊಸ ನಿಯಮಗಳೇ ಕಾರಣ ಎನ್ನಬಹುದು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ಬ್ಯಾಂಕಿನ ಮಾಹಿತಿ, ಅಲ್ಲಿ ವ್ಯವಹಾರಿಸುವ ಬಗ್ಗೆ, ಸೌಲಭ್ಯ ಅನುಕೂಲ ಗಳ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಎಷ್ಟೂ ಜನರಿಗೆ ಬ್ಯಾಂಕಿನ ವ್ಯವಹಾರದ ಬಗ್ಗೆ ಅರಿವಿನ ಕೊರತೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಂಕ್ ನಲ್ಲಿ ಸಾಲ ಪಡೆಯುವುದು ದೊಡ್ಡ ಸವಾಲು ಆಗಿದೆ. ಆದರೆ, ಕಮಿಷನ್ ನೀಡಿದರೆ, ಯಾವುದೇ ತೊಂದರೆ ಇರುವುದಿಲ್ಲ, ಇಂತಹ ಪರಿಸ್ಥಿತಿ ನಮ್ಮ ಮುಂದಿದೆ ಎಂದ ಅವರು, ಪ್ರತಿಯೊಬ್ಬರು ಹಣಕಾಸು ವ್ಯವಹಾರಗಳನ್ನು ಈ ಬ್ಯಾಂಕ್ ಮುಂಖಾತರ ಸುಲಭವಾಗಿ ಮಾಡಬಹುದ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯಾಗಾರದ ಅಧ್ಯಕ್ಷತೆ ವಿಧಾನಸಭೆ ಜಂಟಿ ಕಾರ್ಯದರ್ಶಿ ವಿ.ಲಕ್ಷ್ಮಿ ವಹಿಸಿದ್ದರು. ಉಪನ್ಯಾಸಕರಾದ ಗ್ಲೇನ್ ಬ್ರಾಸ್, ರವೀಂದ್ರನಾಥ್ ಕೌಶಿಕ್, ರವಿಹಂದಿಗೋಳ,ಭಾಗವತ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
