ಮೈಲಾರಲಿಂಗೇಶ್ವರ ಕಾರ್ಣೀಕದ ಉಕ್ತಿಯ ನುಡಿ : ಕಬ್ಬಿಣದ ಸರಪಳಿ ಹರಿತಲೇ ಪರಾಕ್

ಹೂವಿನಹಡಗಲಿ :

      ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಜಾತ್ರೆಯ ಅಂಗವಾಗಿ ಶುಕ್ರವಾರ ಸಂಜೆ 5:30ಕ್ಕೆ ಕಪಿಲಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದ ರಾಮಣ್ಣ ಗೊರವಯ್ಯ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಅವರ ಆರ್ಶಿವಾದ ಪಡೆದು 13 ಅಡಿ ಉದ್ದದ ಬಿಲ್ಲನ್ನು ಏರಿ, ನೆರೆದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಬ್ಬಿಣ ಸರಪಳಿ ಹರಿತಲೇ ಪರಾಕ್ ಎಂಬ ಕಾರ್ಣೀಕ ನುಡಿಯನ್ನು ನುಡಿದನು.

      ಸವಾರಿ ಬಂಡಿ ಹೂಡಿ ಹೊಸ ಬಟ್ಟೆ ತೊಟ್ಟು ಎತ್ತುಗಳ ಕೊರಳಿಗೆ ಗೆಜ್ಜೆ ಕಟ್ಟಿ ಜೂಲವನ್ನು ಹಾಕಿ ಗಲ್ ಗಲ್ ಶಬ್ದ ಮಾಡುತ್ತಾ ಖುಷಿಯಿಂದ ಜಾತ್ರಗೆ ಬಂದ ಭಕ್ತರು ದೇವವಾಣಿಯನ್ನು ಕೇಳಿ ಸಂತೋಷಗೊಂಡರು ಏಕೆಂದರೆ ಪ್ರತಿ ವರ್ಷ ನುಡಿಯುವ ದೇವವಾಣಿಯಲ್ಲಿ ಆ ವರ್ಷದ ಮಳೆ ಬೆಳೆ ರಾಜಕೀಯ ಭವಿಷ್ಯ ಅಡಕವಾಗಿರುತ್ತದೆ.

         ಈ ಬಾರಿಯ ದೇವವಾಣಿ ಹೊಸದಾಗಿದ್ದು, ನಾಡಿನ ಜನತೆಗೆ ಶುಭ ಸೂಚನೆಯನ್ನು ನೀಡಿದೆ. ಈವಾಣಿಯ ಪ್ರಕಾರ ಇದುವರೆಗೂ ಕಗ್ಗಂಟಾಗಿದ್ದ ನಾಡಿನ ಸಮಸ್ಯೆ ಬಗೆಹರಿಯುತ್ತದೆ ನಾಡಿನೆಲ್ಲಡೆ ಉತ್ತಮ ಮಳೆಯಾಗಿ ಸಂಮೃದ್ಧಿ ಬೆಳೆಬರುತ್ತದೆ ಎಂದು ಅರ್ಥೈಸಬಹುದು.

         ದ್ವನಿ ಮುದ್ರಿಸಲು ಜಿಲ್ಲಾಡಳಿತದಿಂದ ಉತ್ತಮ ವ್ಯವಸ್ಥೆ : ಕಳೆದವರ್ಷ ಕಾರ್ಣಿಕದ ನುಡಿ ಅಸ್ಪಷ್ಟವಾಗಿದ್ದರಿಂದ ನಾಡಿನ ಭಕ್ತಾಧಿಗಳಿಗೆ ಗೊಂದಲ ಉಂಟಾಗಿತ್ತು. ಅಂದು ಅಂತಿಮವಾಗಿ ಜಿಲ್ಲಾಡಳಿತ ಆಡಿಯೋ ರೆಕಾರ್ಡಿಂಗ್ ಧ್ವನಿ ಪರೀಕ್ಷೆ ನಡೆಸಿದ ಬಳಿಕ ಅಧಿಕೃತ ಕಾರ್ಣಿಕದ ನುಡಿಯನ್ನು ತಾಲೂಕು ಆಡಳಿತ ದೇವಸ್ಥಾನ ಕಮಿಟಿ, ಪ್ರಕಟಿಸಿತ್ತು.

        ಈ ಭಾರಿ ಅಂತಹ ಗೊಂದಲಗಳಿಗೆ ತೆರೆಯಳೆಯಲು ಕಾರ್ಣಿಕ ನಡೆಯುವ ಡೆಂಕನ ಮರಡಿ ಸ್ಥಳದಲ್ಲಿ 20 ಲೈನರ್ ಸ್ಪೀಕರ್ ಮೂವಿಂಗ್ ಕ್ಯಾಮರಾ ಅಳವಡಿಲಾಗಿತ್ತು ಅಲ್ಲದೆ ಗೊರವಯ್ಯನಿಗೆ ಸೂಕ್ಷ್ಮ ಧ್ವನಿ ಗ್ರಹಿಸುವ ಮೈಕ್ರೋಪೋನ್ ಜೋಡಣೆ ಮಾಡಲಾಗಿತ್ತು. ಕಾರ್ಣಿಕಕ್ಕೂ ಮೊದಲು ಅಧಿಕಾರಿಗಳು ಪ್ರತಿಯೊಂದು ಮೈಕ್ ಗಳನ್ನು ಪರೀಕ್ಷಿಸಿದ ನಂತರ ಕಾರ್ಣಿಕ ನುಡಿಯಲು ಅನುವುಮಾಡಿಕೊಟ್ಟಿತು. ಧ್ವನಿ ಮುದ್ರಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕಾರ್ಣಿಕದ ನಡಿಮುಗಿದ ನಂತರ ಪದೆ ಪದೆ ಮತ್ತೊಮ್ಮೆ ಲಕ್ಷಾಂತರ ಭಕ್ತರಿಗೆ ಕೇಳಿಸಲಾಯಿತು.

         ರಾಜ್ಯ ಮುಜುರಾಯಿ ಸಚಿವ ಪಿ.ಟಿ ಪರಮೇಶ್ವರನಾಯ್ಕ್, ವೈದ್ಯಕೀಯ ಶಿಕ್ಷಣ ಸಚಿವ ತುಕರಾಮ್, ಲಕ್ಷ್ಮಿಪುರ ಗ್ರಾ.ಪಂ.ಅಧ್ಯಕ್ಷ ಪಿ.ಟಿ.ಭರತ್, ಮಾಜಿ ಶಾಸಕ ಬಸವರಾಜ್ ಶಿವಣ್ಣನವರ್, ಜಿ.ಪಂ.ಸದಸ್ಯರಾದ ಎಸ್.ಕೊಟ್ರೇಶ, ಲಲಿತಾಬಾಯಿ ಸೋಮಿನಾಯ್ಕ, ತಾ.ಪಂ.ಸದಸ್ಯ ಅಂಬ್ಲಿ ಮಲ್ಲಪ್ಪ, ಮೈಲಾರ ಗ್ರಾ.ಪಂ.ಅಧ್ಯಕ್ಷೆ ಸರೋಜ ಮಂಜುನಾಥ ನಾಗಮ್ಮನವರ್, ಮುಖಂಡರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ, ಎಸ್.ಪಿ ಅರುಣ್ ರಂಗರಾಜನ್, ತಹಶೀಲ್ದಾರ ಕೆ.ರಾಘವೇಂದ್ರರಾವ್, ತಾ.ಪಂ ಇಒ ಸೋಮಶೇಖರ ಹಾಗೂ ಧಾರ್ಮಿಕದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ, ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶರಾವ್. ಸೇರಿದಂತೆ ಲಕ್ಷಾಂತರ ಭಕ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link