ಬೆಂಗಳೂರು
ಸ್ವಾತಂತ್ರ ಹೋರಾಟಗಾರರಾದ ಶ್ರೀ ಹೆಚ್ ಎಸ್ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು ತಕ್ಷಣ ಅಮಾನತು ಮಾಡಬೇಕು” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ವಿವಾದಿತ ಯತ್ನಾಳ್ರನ್ನು ಪ್ರಸಕ್ತ ಅಧಿವೇಶನದಿಂದ ಹೊರಗಿಡುವಂತೆ ಕಾಂಗ್ರೆಸ್ ಸೋಮವಾರ ಪಟ್ಟು ಹಿಡಿದಿದ್ದು ಈ ಕಾರಣದಿಂದಾಗಿ ಕಲಾಪವನ್ನು ಕೆಲ ಕಾಲ ಮುಂದೂಡಲಾಗಿತ್ತು.”ಬಸವನಗೌಡ ಪಾಟೀಲ್ ಯತ್ನಾಳ್ ಸದನಕ್ಕಲದೆ ನಮ್ಮ ಸ್ವಾತಂತ್ರ ಹೋರಾಟದ ನೆನಪುಗಳಂತಿರುವ ಹಿರಿಯರಿಗೂ ಅಗೌರವ ತೋರಿದ್ದಾರೆ. ಇಂತಹವರು ಸದನದಲ್ಲಿರಲು ಯೋಗ್ಯರಲ್ಲ ಅದಕ್ಕಾಗಿ ಯತ್ನಾಳರನ್ನು ಪ್ರಸಕ್ತ ಅಧಿವೇಶನದಿಂದ ಹೊರಗಿಡಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರನ್ನು ಅವಹೇಳನ ಮಾಡಿದ ಬಗ್ಗೆ ಚರ್ಚೆಗೆ ವಿಧಾನ ಸಭಾಧ್ಯಕ್ಷರು ಅವಕಾಶ ನೀಡದೆ ನಿರಾಶೆಗೊಳಿ ಸಿದ್ದಾರೆ ಎಂದರು.
ಸಂವಿಧಾನ ದ ಹೆಸರಲ್ಲಿ ಪ್ರಮಾಣ ಮಾಡಿದ ಒಬ್ಬ ಶಾಸಕ ರಾಗ ದ್ವೇಷ ವಿಲ್ಲದೇ ಕೆಲಸ ಮಾಡಬೇಕು ಆದರೆ ಯತ್ನಾಳ ತಮ್ಮ ನಡವಳಿಕೆಯಿಂದ ಶಾಸಕ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ” ಎಂದರು.
