ರುದ್ರಭೂಮಿಯಲ್ಲಿ ಮೊಬೈಲ್ ಟವರ್ ತೆರವು.

ಹೊಸಪೇಟೆ :

      ನಗರದ ಹಂಪಿ ರಸ್ತೆಯಲ್ಲಿ ಇರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಸೋಮವಾರ ನಿರ್ಮಾಣ ಹಂತದಲ್ಲಿದ್ದ ಮೊಬೈಲ್ ಟವರ್‍ನ್ನು ವಿವಿಧ ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನು ನೆಲಸಮ ಮಾಡಲಾಯಿತು.

       ವಿವಿಧ ಸಮಾಜದ ಮುಖಂಡರಾದ ಗೌಡ್ರ ರಾಮಚಂದ್ರಗೌಡ, ಮರಿಸ್ವಾಮಿ, ಎಂ.ಕೆ.ಹನುಮಂತಪ್ಪ, ಎನ್.ವೀರಸ್ವಾಮಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಸಭೆ ಸೇರಿ ಸಾರ್ವಜನಿಕ ರುದ್ರಭೂಮಿಯಲ್ಲಿ ಕೆಲವು ಪಟ್ಟಭದ್ರರು ಮೊಬೈಲ್ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಇದನ್ನು ತೆರವುಗೊಳಿಸಲೇಬೇಕು ಎಂದು ನಿರ್ಧರಿಸಿ ಕೊನೆಗೆ ಜೆಸಿಬಿ ಸಹಾಯದಿಂದ ನೆಲಸಮ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ