ಪಿಡಿಓ ವಿರುದ್ಧ ಕರ್ತವ್ಯ ಲೋಪದ ಆರೋಪ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

 ಮಧುಗಿರಿ:  

     ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡದೆ ಕರ್ತವ್ಯ ಲೋಪವೆಸಗುತ್ತಿರುವ ಪಿಡಿಓ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಘೋಷಣೆಗಳನ್ನು ಕೂಗಿ ಕೆಲ ಕಾಲ ಪ್ರತಿಭಟನೆ ನಡೆಸಿದರು.

     ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ತುಮಕೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಚಂದ್ರಗಿರಿ ಗ್ರಾ.ಪಂ ಪಿಡಿಓ ಅವರನ್ನು ಅಮಾನತು ಮಾಡಿ ಎಂದು ಸಂಭಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದರೂ ಪಿಡಿಓ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಇವರಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು ಪಿಡಿಓ ವಿರುದ್ಧ ಆರೋಪಗಳ ಸುರಿಮಳೆಗೈದರು.

       ನರೇಗಾ ಬಿಲ್ ಮಾಡುತ್ತಿಲ್ಲ : ಪ್ರತಿಭಟನಾ ನಿರತ ಗ್ರಾ.ಪಂ ಅಧ್ಯಕ್ಷೆ ಕೆ.ಟಿ.ಸವಿತಾ ಅವರು ಮಾತನಾಡಿ ಪಿಡಿಓ ಸಂತೋμïಸಿಂಗ್ ಅವರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ, ನಿರಂತರವಾಗಿ ಗೈರು ಹಾಜರಾಗುತ್ತಿದ್ದಾರೆ. ಗ್ರಾಮದ ಸಮಸ್ಯೆಗಳ ಬಗ್ಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಲ್ಲಿ ಮಾಡಿದ ಕಾಮಗಾರಿಗಳ ಬಿಲ್ ಮಾಡಿಕೊಡುತ್ತಿಲ್ಲ ಎಂದು ಒತ್ತಾಯಿಸಿದರು.

ಸಚಿವರ ಆದೇಶ ಪಾಲನೆಯಾಗಿಲ್ಲ :

      ಗ್ರಾ.ಪಂ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿ ಗ್ರಾಮೀಣಾಭಿವೃದ್ದಿ ಸಚಿವರ ಸಭೆಯಲ್ಲಿ ಪಿಡಿಓ ಸಂತೋμï ಸಿಂಗ್ ಅವರ ವಿರುದ್ಧ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು ದೂರು ನೀಡಿದ್ದರು. ಸಚಿವರು ಪಿಡಿಓ ಅವರನ್ನು ಕರೆಯಿರಿ ಎಂದು ಸೂಚಿಸಿದಾಗ ಪಿಡಿಓ ಸಭೆಯಲ್ಲಿ ಇರಲಿಲ್ಲ. ಇದರಿಂದ ಕೋಪಗೊಂಡ ಸಚಿವರು ಪಿಡಿಓ ಅವರನ್ನು ತಕ್ಷಣ ಅಮಾನತು ಮಾಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಅವರ ಆದೇಶ ಕಾರ್ಯಗತವಾಗಿಲ್ಲದಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

  ಸಾಮಾನ್ಯಸಭೆ ಬಹಿಷ್ಕರಿಸುವ ಎಚ್ಚರಿಕೆ :

       ಸರ್ಕಾರದ ಭಾಗವಾಗಿರುವ ಮಂತ್ರಿಗಳ ಮಾತಿಗೇ ಕಿಮ್ಮತ್ತಿಲ್ಲ ಎಂದರೆ ಏನರ್ಥ. ಅವರ ಮಾತಿಗೆ ಗೌರವ ಸಿಗಬೇಕೆಂದರೆ ಪಿಡಿಓ ಅವರನ್ನು ತಕ್ಷಣ ಅಮಾನತು ಮಾಡಬೇಕು. ಗ್ರಾ.ಪಂನಲ್ಲಿ 14 ಜನ ಸದಸ್ಯರಿದ್ದು, ಪಿಡಿಓ ಸಂತೋμïಸಿಂಗ್ ಅವರನ್ನು ಇಲ್ಲಿಂದ ವರ್ಗಾವಣೆ ಅಥವಾ ಅಮಾನತು ಮಾಡುವವರೆಗೂ 12 ಜನ ಗ್ರಾ.ಪಂ ಸದಸ್ಯರು ಪಂಚಾಯ್ತಿಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಸಭೆ ನಡೆಸುವುದಿಲ್ಲ ಮತ್ತು ಯಾವುದೇ ಚೆಕ್‍ಪಾಸ್ ಮಾಡುವುದಿಲ್ಲ ಪಂಚಾಯ್ತಿಯ ಒಳಗೆ ಕಾಲಿಡುವುದಿಲ್ಲ ಎಂದು ಪಟ್ಟು ಹಿಡಿದರು.

ದೇವಾಲಯದ ಜಾಗ ಒತ್ತುವರಿ :

       ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದಾಗ ಸ್ಥಳದಲ್ಲಿ ಹಾಜರಿದ್ದ ಮುಖಂಡ ಡಾ.ಮೋಹನ್ ಮಾತನಾಡಿ ಗ್ರಾಮದ ಮಾರಮ್ಮನ ದೇವಾಲಯದ ಖಾಲಿ ಜಾಗವನ್ನು ಕೆಲವರು ಒತ್ತುವರಿ ಮಾಡುತ್ತಿದ್ದಾರೆ. ಈಗಿರುವ ಜಾಗವನ್ನು ಗುರುತಿಸಿ ದೇವಾಲಯದ ಹೆಸರಿಗೆ ಮಾಡಿಕೊಡಿ ಎಂದು ಅರ್ಜಿನ್ನು ನೀಡಿದ್ದರೂ ಪಿಡಿಓ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಸಡ್ಡೆ ಮನೋಭಾವವನ್ನು ತೋರುತ್ತಿದ್ದಾರೆಂದು ಆರೋಪಿಸಿದರು. ಕೂಡಲೇ ಖಾಲಿ ಜಾಗದ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಇಓ ಅವರು ಪಿಡಿಓ ಅವರಿಗೆ ಸೂಚಿಸಿದರು.
ಎನ್‍ಓಸಿಗೆ ಜನರ ಅಲೆದಾಟ : ಗ್ರಾಮಸ್ಥ ರಂಗನಾಥ್ ಮಾತನಾಡಿ ನಾನು ಮನೆ ನಿರ್ಮಾಣ ಮಾಡಿದ್ದು, ವಿದ್ಯುತ್ ಸೌಲಭ್ಯ ಪಡೆಯುವುದಕ್ಕಾಗಿ ಸುಮಾರು 7 ಬಾರಿ ಗ್ರಾಪಂಗೆ ಅಲೆದಾಡಿದ್ದೇನೆ. ಎನ್‍ಓಸಿ ಬಗ್ಗೆ ಕೇಳಿದರೆ ಕಾರ್ಯದರ್ಶಿಗೆ ಕೇಳಿ ಅವರನ್ನು ಕೇಳಿದರೆ ಪಿಡಿಓ ಅವರನ್ನೇ ಕೇಳಿ ಎಂದು ಸುಖಾ ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.

     ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟ ಗ್ರಾ.ಪಂ ಸದಸ್ಯರು ಮತ್ತು ಗ್ರಾಮಸ್ಥರು, ನಿಗದಿತ ಗಡುವಿನೊಳಗೆ ಸಮಸ್ಯೆ ಬಗೆ ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

     ಪ್ರತಿಭಟನೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಸದಸ್ಯರಾದ ರಾಜಮ್ಮ, ರೇಣುಕಮ್ಮ, ವನಜಾಕ್ಷಿ, ಭಾಗ್ಯಮ್ಮ, ಈರಮ್ಮ, ತಿಮ್ಮಯ್ಯ, ಸಿ.ಆರ್.ರವಿ, ಶ್ರೀನಿವಾಸ್, ನರಸಿಂಹಯ್ಯ ಮತ್ತು ಗ್ರಾಮಸ್ಥರಾದ ಮಂಜುನಾಥ್, ವಾಗೀಶ್, ಹನುಮಂತರಾಯಪ್ಪ, ಕೃಷ್ಣಪ್ಪ, ರಂಗಪ್ಪ, ಭೈರಪ್ಪ, ತಿಮ್ಮಣ್ಣ, ಈರಣ್ಣ ಮತ್ತಿತರರು ಇದ್ದರು.

    ಇಓ ಬಂದರೂ ಹಾರದ ರಾಷ್ಟ್ರಧ್ವಜ :

      ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ತಾ.ಪಂ ಇಓ ದೊಡ್ಡಸಿದ್ದಯ್ಯ ಅವರು ಆಗಮಿಸಿದಾಗ ಗ್ರಾ.ಪಂ ಕಚೇರಿಯ ಮೇಲ್ಬಾಗದಲ್ಲಿ ಮಧ್ಯಾಹ್ನವಾದರೂ ರಾಷ್ಟ್ರ ಧ್ವಜವನ್ನೇ ಹಾರಿಸಿರಲಿಲ್ಲ. ಇದನ್ನು ಇಓ ಗಮನಕ್ಕೆ ತಂದ ಸದಸ್ಯರು ಪಿಡಿಓ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಉದಾರಹಣೆ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಇಓ ದೊಡ್ಡಸಿದ್ದಯ್ಯ ಗ್ರಾ.ಪಂ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಏಕೆ ಹಾರಿಸಿಲ್ಲ ಎಂದು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.

       ಪಿಡಿಓ ಅವರು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಸದಸ್ಯರು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಗ್ರಾಪಂನಲ್ಲಿ ಭ್ರμÁ್ಟಚಾರ ಮಿತಿಮೀರಿದ್ದು, ಪ್ರತಿಯೊಂದಕ್ಕೂ ಹಣದ ಬೇಡಿಕೆಯಿಡುತ್ತಾರೆ. ಇವರನ್ನು ತಕ್ಷಣ ಇಲ್ಲಿಂದ ವರ್ಗಾವಣೆಗೊಳಿಸಿ ಅಥವಾ ಅಮಾನತು ಮಾಡಿ

-ಕೆ.ಟಿ.ಸವಿತಾ, ಅಧ್ಯಕ್ಷೆ, ಗ್ರಾ.ಪಂ, ಚಂದ್ರಗಿರಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link