ಮಧುಗಿರಿ :
ಎತ್ತಿನಹೊಳೆ ಕಾಮಗಾರಿ ಸಂಬಂಧ ಬಂಡೆಯನ್ನು ಹಾಡಹಗಲೇ ಬ್ಲಾಸ್ಟ್ ಮಾಡಿದ ಕಾರಣ ದಾರಿ ಹೋಕರ ಮೇಲೆ ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಕಲ್ಲಿನ ಚೂರುಗಳು ಸಿಡಿದು ರೈತರು ದಿಕ್ಕಾಪಾಲಾಗಿ ಓಡಿದ ಘಟನೆ ತಾಲ್ಲೂಕಿನ ಬಸವನಹಳ್ಳಿ ಸಮೀಪ ಕೆಎಸ್ಸಾರ್ಟಿಸಿ ಡಿಪೋ ಮುಂಭಾಗದ ಬ್ಯೆಪಾಸ್ ರಸ್ತೆಯ ಜಮೀನುಗಳಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಈ ಬ್ಲಾಸ್ಟ್ನಿಂದಾಗಿ ಕಳೆದ ಮೂರು ದಿನಗಳಿಂದ ಭೂಮಿ ನಡುಗಿದ ಜತೆಗೆ ಹಾಡ ಹಗಲೇ ಬುಧವಾರ ಮಧ್ಯಾಹ್ನ 1-20 ಕ್ಕೆ ಬಂಡೆಯನ್ನು ಬ್ಲಾಸ್ಟ್ ಮಾಡಲು ಉಪಯೋಗಿಸಿದ ರಾಸಾಯನಿಕ ವಸ್ತುವಿನ ತೀವ್ರತೆ ಹೆಚ್ಚಾಗಿದ್ದ ಕಾರಣ ಸುಮಾರು ಐದರಿಂದ ಹತ್ತು ಕೆಜಿಗೂ ಹೆಚ್ಚು ತೂಕದ ಕಲ್ಲುಗಳು ಬೈಪಾಸ್ ರಸ್ತೆಗೆ ಸಿಡಿದಿವೆ. ಬೈಪಾಸ್ ರಸ್ತೆಯಲ್ಲಿ ಸೀಬೆ ಕಾಯಿ ವ್ಯಾಪಾರ ಮಾಡುತ್ತಿದ್ದ ಭೈರಪ್ಪ ಎಂಬವರಿಗೂ ಮತ್ತು ಅವರ ವಾಹನಕ್ಕೂ ಹಾನಿಯಾಗಿದೆ. ಈ ಕಲ್ಲಿನ ಚೂರುಗಳು ಸುತ್ತಮುತ್ತಲ ಪ್ರದೇಶದಲ್ಲಿ ಹರಡಿವೆ. ಆರ್ಟಿಓ ಇಲಾಖೆಯ ನಿವೃತ್ತ ನೌಕರ ಪ್ರತ್ಯಕ್ಷದರ್ಶಿಗಳಾಗಿದ್ದು, ಬಂಡೆಯ ಸಿಡಿತಕ್ಕೆ ಹೆದರಿದಂತಾದ ಅವರು ಈ ಬಗ್ಗೆ ಪೆÇಲೀಸರು ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಡಿವೈಎಸ್ಪಿ ರಾಮಕೃಷ್ಣಯ್ಯ ಡಿಪೋ ಎದುರುಗಡೆಯಿರುವ ಹೋಟೆಲ್ನಲ್ಲಿ ಊಟ ಮಾಡುತ್ತಿದ್ದಾಗ ಪತ್ರಕರ್ತರು ಗಮನ ಸೆಳೆದಾಗ ಹಾಡು ಹಗಲಲ್ಲೇ ಬ್ಲಾಕ್ ಮಾಡುವಂತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಧುಗಿರಿ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
