ಮಧುಗಿರಿ :
ತಾಲ್ಲೂಕಿನ ಪುರವರ ಹೋಬಳಿಗೆ ಸೇರಿದ ಹಂದ್ರಾಳು ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯವರ ಧನುರ್ಮಾಸದ ಪೂಜೆಯ ಅಂಗವಾಗಿ ಹೋಮ, ಹೊಸದಾಗಿ ನಿರ್ಮಾಣಗೊಂಡ ತೇರು ಹಾಗೂ ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಬಂಧವಾಗಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಸುಮಾರು ವರ್ಷಗಳಿಂದಲೂ ದೇಶದ ಎಲ್ಲಾ ಕಡೆಯಲ್ಲಿಯೂ ಕೊರೊನಾ ಭೀತಿ ಆವರಿಸಿದ್ದ ಕಾರಣ ಭಕ್ತಾದಿಗಳು ಬರುವುದು ಇಲ್ಲವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು.
ಈಗ ಹೊಸದಾಗಿ ನಿರ್ಮಾಣವಾಗಿರುವ ರಥಕ್ಕೆ ಸಾವಿರಾರು ರೂಪಾಯಿ ಬೆಲೆ ಬಾಳುವ ಹೂವಿನ ಹಾರ, ಬಿಡಿ ಹೂ ಮತ್ತು ಇತರೆ ಸಾಮಗ್ರಿಗಳನ್ನು ಹಾಕಿದ್ದನ್ನು ನೋಡಿ ಭಕ್ತರು ಸಂತೋಷಪಟ್ಟರು. ಸಂಜೆ ಸುಮಾರು ಸಹಸ್ರಾರು ಮಂದಿ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಚಿಕ್ಕರಂಗಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ