ಮಧುಗಿರಿ ಪಟ್ಟಣದಲ್ಲಿ ಮಧ್ಯ ರಾತ್ರಿ ಕರಡಿ ಪ್ರತ್ಯಕ್ಷ..!

 ಮಧುಗಿರಿ : 

      ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ಸೋಮವಾರ ಮಧ್ಯ ರಾತ್ರಿ ಸುಮಾರು 1.30 ಗಂಟೆ ಸಮಯದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ. ಕಾಲನಿಯ ಐಯ್ಯಂಗಾರ್ ಬೇಕರಿಯವರ ಮನೆ ಮುಂದೆ ರಾತ್ರಿ ಕರಡಿ ಕಾಣಿಸಿಕೊಂಡಿದ್ದು, ವಾರ್ಡ್ ಜನರು ಭಯ ಭೀತರಾಗಿದ್ದಾರೆ.

     ತಾಲ್ಲೂಕಿನ ಹಳ್ಳಿಗಳಲ್ಲಿ ರೈತರು ಜಮೀನಿನಲ್ಲಿ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಕರಡಿ ದಾಳಿ ಮಾಡಿವೆ. ಇದೇ ರೀತಿ ಪಟ್ಟಣದ ವಿವಿಧ ಕಡೆ ಈ ರೀತಿ ಕರಡಿ ಸೇರಿದಂತೆ ಮತ್ತಿತರರ ವನ್ಯ ಪ್ರಾಣಿಗಳು ಪ್ರತ್ಯಕ್ಷವಾಗುತ್ತಿವೆ. ಸುಮಾರು ತಿಂಗಳಯಿಂದೆಯಷ್ಟೆ ಉಪಾವಿಭಾಗಾಧಿಕಾರಿಗಳ ಕಛೇರಿಯೋಳಗೆ ಕರಡಿ ನುಗ್ಗಿದ್ದು, ಸಿಬ್ಬಂದಿ ಹಾಗೂ ಪಕ್ಕದಲ್ಲೆ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿಯವರು ಭಯ ಭೀತರಾಗಿದ್ದರು.

      ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಪಾಡು ಹೇಳತೀರದಾಗಿದ್ದು, ಕೇವಲ ಲಾಠಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯಿಂದ ನೀಡಿರುವ ಆಯುಧಗಳನ್ನು ಬಳಸುತ್ತಿಲ್ಲ. ಒಂದು ವೇಳೆ ಏನಾದರೂ ಆಗ ಬಾರದ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಅವರ ಆತ್ಮ ರಕ್ಷಣೆಗಾಗಿಯಾದರೂ ಆಯುಧಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link