ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ವ್ಯಕ್ತಿಯಿಂದ ಬೆದರಿಕೆ

ಮಥುರಾ: 

    ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಮಾಹಿತಿ ತಿಳಿದುಬಂದಿದೆ. ಕಾರನ್ನು ಲಾಕ್​ ಮಾಡಿ ಯುವಕ ಮೊದಲು ಪೆಟ್ರೋಲ್ ಸುರಿದುಕೊಂಡಿದ್ದಾನೆ, ಪೊಲೀಸರು ಗಾಜು ಒಡೆದು ಹೊರಗೆ ಕರೆದೊಯ್ದರು ಮತ್ತು ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ.

   ಗುಪ್ತಚರ ಸಂಸ್ಥೆಗಳಿಂದ ಹಿಡಿದು ಜಿಲ್ಲಾ ಪೊಲೀಸರವರೆಗೂ ಒಮ್ಮೆ ಗಾಬರಿಗೊಂಡಿದ್ದರು. ಪೊಲೀಸರು ಸಂಪೂರ್ಣ ತನಿಖೆ ನಡೆಸಿದಾಗ ಯುವಕನ ನಾಲ್ವರು ಪುತ್ರರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಅವರು ಮಾನಸಿಕವಾಗಿ ಚೆನ್ನಾಗಿಲ್ಲ. ಅವರ ಕುಟುಂಬದವರೂ ಬಂದಿದ್ದರು. ಸಂಜೆಯವರೆಗೂ ಪೊಲೀಸರು ಆತನನ್ನು ಕಸ್ಟಡಿಯಲ್ಲಿಟ್ಟಿದ್ದರು.

    ವ್ಯಕ್ತಿಯನ್ನು ಜಮುನಾಪರ್ ಮೀರಾ ವಿಹಾರ್ ಕಾಲೋನಿ ನಿವಾಸಿ ಪುಷ್ಪೇಂದ್ರ ಚೌಧರಿ ಎಂದು ಗುರುತಿಸಲಾಗಿದೆ. ಸಾಲ ಮಾಡಿ ಕಾರು ತೆಗೆದುಕೊಂಡಿದ್ದು, ಟ್ಯಾಕ್ಸಿಯಾಗಿ ಓಡಿಸುತ್ತಿದ್ದಾರೆ. ಅವರ ಪತ್ನಿ ಪ್ರವೇಶ್ ಮೂರು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಅದರಲ್ಲಿ ಮಗು ಮೃತಪಟ್ಟಿದೆ. ಇದಕ್ಕೂ ಮುನ್ನ ಅವರ ಮೂವರು ಪುತ್ರರು ಮೃತಪಟ್ಟಿದ್ದರು. 

   ವ್ಯಕ್ತಿಯ ಪತ್ನಿಯೂ ಅಸ್ವಸ್ಥರಾಗಿದ್ದಾರೆ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರು ತಿಂಗಳು ಮನೆಯಿಂದ ಹೊರಗಿದ್ದರು. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಹಿ ಈದ್ಗಾ ಮಸೀದಿ ಬಳಿಯ ಮಿಲನ್ ತಿರಹಾದಲ್ಲಿ ಕಾರಿನಲ್ಲಿ ಕುಳಿತಿದ್ದರು. ಆಗ ಟ್ರಾಫಿಕ್ ಪೊಲೀಸರು ಆತನನ್ನು ತಡೆದು ಚಲನ್ ನೀಡಿದ್ದರು.

   ಆಗ ಕೋಪಗೊಂಡ ಆತ ಶಾಹಿ ಈದ್ಗಾ ಮಸೀದಿಗೆ ನುಗ್ಗಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆತನಿಗೆ ಯಾವುದೇ ದೇಶ ವಿರೋಧಿ ಸಂಘಟನೆ ಜತೆ ಸಂಪರ್ಕವಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯ ನಂತರ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಯಾವುದೇ ರೀತಿಯ ನಿರ್ಲಕ್ಷ್ಯ ಮನೋಭಾವನೆ ತೋರಿಲ್ಲ ಎನ್ನುವ ವರದಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗಿದೆ. ಶಾಹಿ ಈದ್ಗಾ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap