ಕಾಮಿಡಿ ಮೂಲಕ ಸಂದೇಶ: ಕಾಮಿಡಿ ಕಿಲಾಡಿಗಳ ಹಳ್ಳಿ ಹೈಕ್ಳ ಪ್ಯಾಟೆ ಲೈಫು

ಬೆಂಗಳೂರು: ಕಾಮಿಡಿ ಮೂಲಕ ಸಂದೇಶ: ಕಾಮಿಡಿ ಕಿಲಾಡಿಗಳ ಹಳ್ಳಿ ಹೈಕ್ಳ ಪ್ಯಾಟೆ ಲೈಫು

 

ಕಿರುತೆರೆಯಲ್ಲಿ ಪ್ರಸಾರವಾಗುವ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಹಲವು ಕಲಾವಿದರು ಈಗ ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಅದೇ ತರಹ, ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ರಿಯಾಲಿಟಿ ಶೋಗಳಲ್ಲಿ ಮಿಂಚಿದ ನಟ-ನಟಿಯರನ್ನಿಟ್ಟುಕೊಂಡು, ಇದೀಗ ಸದ್ದಿಲ್ಲದೆ ಒಂದು ಚಿತ್ರ ಮಾಡಲಾಗಿದೆ.

     ಅದೇ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’. ಈ ಚಿತ್ರ ಇಂದು (ಫೆ. 4) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮೂವರು ವಿದ್ಯಾವಂತ ಹಳ್ಳಿ ಯುವಕರು ವ್ಯವಸಾಯ ಮಾಡುವುದು ಅವಮಾನ ಎಂದುಕೊಂಡು, ಪಟ್ಟಣಕ್ಕೆ ಪ್ರಯಾಣ ಬೆಳೆಸುವುದು ಚಿತ್ರದ ಕಥೆಯಂತೆ. ಅಲ್ಲಿನ ಕಲರ್​ಫುಲ್​ ಜೀವನಕ್ಕೆ ಮಾರುಹೋಗುವ ಅವರು, ಅಲ್ಲಿ ಏನೆಲ್ಲ ಅನುಭವಿಸುತ್ತಾರೆ ಮತ್ತು ಹಳ್ಳಿಯೇ ವಾಸಿ ಎಂದು ಹೇಗೆ ವಾಪಸ್ಸಾಗುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಈ ಚಿತ್ರವನ್ನು ಮಂಜು ಗಂಗಾವತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಪದ್ಮಾವತಿ’ ಖ್ಯಾತಿಯ ತ್ರಿವಿಕ್ರಂ, ಮಡೆನೂಡು ಮನು, ಜಗ್ಗಪ್ಪ, ರಾಘು, ಶರಣ್ಯ, ಹಿಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ‘ಬಿಗ್​ ಬಾಸ್​’ ವಿಜೇತ ಮಂಜು ಪಾವಗಡ, ಗೋವಿಂದೇಗೌಡ, ಮೀಸೆ ಆಂಜನಪ್ಪ ಮುಂತಾದವರು ಸಹ ಚಿತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಮಂಡ್ಯ, ಸಕಲೇಶಪುರ, ರಾಮನಗರ ಮುಂತಾದ ಕಡೆ ಚಿತ್ರೀಕರಣವಾಗಿರುವ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’ ಚಿತ್ರಕ್ಕೆ ಯುಗಾಂತ್​ ಸಂಗೀತ ಮತ್ತು ನಾಗರಾಜಮೂತಿರ್ ಛಾಯಾಗ್ರಹಣವಿದೆ.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link