ರಸ್ತೆ ಸುರಕ್ಷತಾ ಬಗ್ಗೆ ತಿರಸ್ಕರಿಸದಂತೆ ಸಿ.ಪಿ.ಐ ಎಚ್ಚರಿಕೆ

ಮಿಡಿಗೇಶಿ :

       ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹೊಸಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಧುಗಿರಿ ತಾಲ್ಲೂಕಿನ ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಎಸ್.ಸರ್ದಾರ್ ರವರು ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿದರು.

      ಸರ್ದಾರ್ ರವರು ಸಾರ್ವಜನಿಕರನ್ನು ಆಟೋಚಾಲಕರು, ಬಸ್, ಲಾರಿ ಚಾಲಕರು, ವಿವಿಧ ರೀತಿಯ ದ್ವಿಚಕ್ರ ವಾಹನ ಸವಾರರು, ವಿವಿಧ ಸಂಘಟನೆಗಳ ಸದಸ್ಯರನ್ನು ಗ್ರಾಮ ಪಂಚಾಯಿತಿ ಚುನಾಯಿತ ಜನ ಪ್ರತಿನಿಧಿಗಳವರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳವರನ್ನು ಒಟ್ಟಿಗೆ ಫೆ.1 ರಂದು ಬೆಳಿಗ್ಗೆ ಸೇರಿಸಿ ರಸ್ತೆ ಸುರಕ್ಷತಾ ಅಭಿಯಾನದ ಬಗ್ಗೆ ತಿಳುವಳಿಕೆ ನೀಡಿದರಲ್ಲದೆ, ಕಾನೂನು ಮೀರಿ ನಡೆದಲ್ಲಿ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಸಂಭಂದಿಸಿದ ಅಧಿಕಾರಿಗಳಿಂದ ತಪ್ಪ ಮಾಡಿದವರಿಗೆ ಯಾವಾ ಯಾವ ಹಂತದ ದಂಡಗಳನ್ನು ವಿಧಿಸುವ ಬಗ್ಗೆ ತಮ್ಮದೇ ಆದ ಭಾಷೆಯಲ್ಲಿ ಎಚ್ಚರಿಕೆಯ ವಿಷಯವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಪಿ.ಎಸ್.ಐ ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap