ಮಿಡಿಗೇಶಿ :
ಆ.23 ರ ತಡ ರಾತ್ರಿ 12-30 ಸಮಯದಲ್ಲಿ ಕೆ.ಆರ್. ಪೇಟೆಯಿಂದ ಆಂಧ್ರದ ನಂದ್ಯಾಲಿಗೆ
ಎಳೆ ನೀರನ್ನು ಹೊತ್ತೊಯ್ಯುತ್ತಿದ್ದ ಲಾರಿ (ಎ.ಪಿ.21 ಟಿ.ವೈ9218) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾಗಿದೆ.
ಎಳೆ ನೀರು ದಿಕ್ಕಾಪಾಲಾಗಿದ್ದು, ಲಾರಿ ಜಖಂಗೊಂಡಿದೆ. ಚಾಲಕ ಪ್ರಸಾದ್ಗೆ ಬಲಗೈಗೆ ಪೆಟ್ಟು ಬಿದ್ದಿದ್ದು, ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವ ಬಗ್ಗೆ ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
