ಹುಳಿಯಾರು : ಅಗ್ನಿ ಅವಘಡ : 4 ರಾಸುಗಳು ಭಸ್ಮ

ಹುಳಿಯಾರು : 

      ದನದ ಕೊಟ್ಟಿಗೆಗೆ ಬೆಂಕಿ ಬಿದ್ದು 4 ರಾಸುಗಳು ಹಾಗೂ ದ್ವಿಚಕ್ರ ವಾಹನ ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

     ಮಾದಾಪುರ ಗ್ರಾಮದ ಪರಮೇಶ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ. ಎಂದಿನಂತೆ ತೋಟದಲ್ಲಿನ ದನದ ಕೊಟ್ಟಿಗೆಗೆ ರಾಸುಗಳನ್ನು ಕಟ್ಟಿ ಮನೆಗೆ ಬಂದು ಮಲಗಿದ್ದಾರೆ. ಮಧ್ಯರಾತ್ರಿಯಲ್ಲಿ ಬೆಂಕಿ ಬಿದ್ದಿದ್ದು, ಬೆಳಗಿನ ಜಾವ ಬಹಿರ್ದೆಸೆಗೆ ಬಂದವರು ಗಮನಿಸಿ ಪರಮೇಶ್‍ಗೆ ವಿಷಯ ತಿಳಿಸಿದ್ದಾರೆ.

      ಪರಮೇಶ್ ಹಾಗೂ ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ದನದ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿ ಬೆಂಕಿಯ ಕೆನ್ನಾಲಿಗೆಗೆ ಎರಡು ಹೋರಿ, ಎರಡು ಕರುಗಳು ಸೇರಿದಂತೆ ಒಂದು ಟಿವಿಎಸ್ ಎಕ್ಸೆಲ್ ವಾಹನ ಸುಟ್ಟು ಕರಕಲಾಗಿದೆ.

      ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಘಟನಾ ಸ್ಥಳಕ್ಕೆ ಹಂದನಕೆರೆ ಪೊಲೀಸ್ ಠಾಣಾಧಿಕಾರಿ ಶಿವಪ್ಪ ಮತ್ತು ಸಿಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link