ಕೋಲ್ಕತ್ತಾ
ವಕ್ಫ್ ಕಾಯ್ದೆಯ ವಿರುದ್ಧವಾಗಿ ಏಪ್ರಿಲ್ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವರದಿ ಹೊರಬಿದ್ದಿದೆ. ಹಿಂಸಾಚಾರದ ಸಂದರ್ಭದಲ್ಲಿ ಹಿಂದೂಗಳನ್ನು ಗುರಿಯಾಗಿದಲಾಗಿತ್ತು ಎಂದು ಹೈಕೋರ್ಟ್ ರಚಿಸಿದ್ದ ತನಿಖಾ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಸಮಿತಿಯ ವರದಿ ಪ್ರಕಾರ, ತೃಣಮೂಲ ನಾಯಕರು ಕೂಡ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಹಿಂಸಾಚಾರದ ಸಮಯದಲ್ಲಿ ರಾಜ್ಯ ಪೊಲೀಸರು ಕೂಡ ಮೂಕ ಪ್ರೇಕ್ಷಕರಾಗಿ ಎಲ್ಲವನ್ನು ನೋಡುತ್ತಿದ್ದರೇ ವಿನಃ ಯಾರ ಸಹಾಯಕ್ಕೂ ಧಾವಿಸಲಿಲ್ಲ. ಶಾಸಕರ ಎದುರೇ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 17ರಂದು ಹೈಕೋರ್ಟ್ ಸಮಿತಿ ರಚಿಸಿತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ನ್ಯಾಯಾಂಗ ಸೇವೆಗಳ ಸದಸ್ಯರನ್ನು ಒಳಗೊಂಡ ಈ ಸಮಿತಿಯು ತನ್ನ ವರದಿಯಲ್ಲಿ ಹಿಂಸಾಚಾರದ ಗುರಿ ಹಿಂದೂ ಸಮುದಾಯ ಎಂದು ಸ್ಪಷ್ಟವಾಗಿ ಹೇಳಿದೆ. ತೃಣಮೂಲ ಶಾಸಕ ಅಮೀರುಲ್ ಇಸ್ಲಾಂ ಕೂಡ ಬೇದ್ವಾನಾ ಗ್ರಾಮಕ್ಕೆ ಬಂದು ಯಾವ ಮನೆಗಳ ಮೇಲೆ ದಾಳಿ ನಡೆದಿಲ್ಲ ಎಂದು ನೋಡಿದರು, ನಂತರ ದಾಳಿಕೋರರು ಆ ಮನೆಗಳಿಗೆ ಬೆಂಕಿ ಹಚ್ಚಿದರು. ಇದೆಲ್ಲವೂ ಶಾಸಕರ ಮುಂದೆಯೇ ನಡೆಯಿತು, ಆದರೆ ಅವರು ಏನೂ ಮಾಡದೆ ಸ್ಥಳದಿಂದ ಹೊರಟುಹೋದರು. ಸಂತ್ರಸ್ತರು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ನೀರಿನ ಸಂಪರ್ಕ ಕಡಿತಗೊಳಿಸಿದ್ದರು
ವರದಿಯ ಪ್ರಕಾರ, ಆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಅಂಗಡಿಗಳು ಮತ್ತು ಮಾಲ್ಗಳ ಧ್ವಂಸ ನಡೆದಿದೆ. ದಾಳಿಕೋರರು ಶಂಶೇರ್ಗಂಜ್, ಹಿಜಲ್ತಲಾ, ಶಿಯುಲಿತಲಾಲಾ, ದಿಗ್ರಿ ನಿವಾಸಿಗಳಾಗಿದ್ದು, ಮುಖ ಮುಚ್ಚಿಕೊಂಡು ಬಂದಿದ್ದರು. ಬೆಂಕಿಯನ್ನು ನಂದಿಸಲು ಸಾಧ್ಯವಾಗದಂತೆ ದಾಳಿಕೋರರು ನೀರಿನ ಸಂಪರ್ಕಗಳನ್ನು ಸಹ ಕಡಿತಗೊಳಿಸಿದ್ದರು. ಈ ದಾಳಿಯು ಗ್ರಾಮದ ಮಹಿಳೆಯರಲ್ಲಿ ಭೀತಿಯನ್ನು ಉಂಟುಮಾಡಿತು ಮತ್ತು ಅವರು ತಮ್ಮ ಸಂಬಂಧಿಕರೊಂದಿಗೆ ಬೇರೆಡೆ ಆಶ್ರಯ ಪಡೆದರು.
ದೇವಾಲಯಗಳಿಗೂ ಹಾನಿಯಾಗಿದೆ ಹಿಂಸಾಚಾರದ ಸಮಯದಲ್ಲಿ ದಾಳಿಕೋರರು ಸಾಕಷ್ಟು ಅವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ತನಿಖಾ ಸಮಿತಿ ಹೇಳಿದೆ. ದಿನಸಿ, ಹಾರ್ಡ್ವೇರ್, ವಿದ್ಯುತ್ ಮತ್ತು ಬಟ್ಟೆ ಅಂಗಡಿಗಳು ಹಾಗೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಯಿತು. ಇದೆಲ್ಲವೂ ಪೊಲೀಸ್ ಠಾಣೆಯಿಂದ 300 ಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ. ಘೋಷ್ಪದ ಪ್ರದೇಶವೊಂದರಲ್ಲೇ 29 ಅಂಗಡಿಗಳು ಹಾನಿಗೊಳಗಾಗಿವೆ. ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದ ನಂತರ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದೆ.
ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದ ಹೈಕೋರ್ಟ್ಹಿಂಸಾಚಾರ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪುನರ್ವಸತಿ ಪ್ಯಾಕೇಜ್ ಒದಗಿಸುವ ಅಗತ್ಯವನ್ನು ಸಮಿತಿಯು ತನ್ನ ವರದಿಯಲ್ಲಿ ಸೂಚಿಸಿದೆ ಎಂದು ಪೀಠ ಹೇಳಿದೆ. ನಾಗರಿಕರ ಒಂದು ವರ್ಗಕ್ಕೆ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಸರಿದೂಗಿಸಲು ಇದೊಂದೇ ಮಾರ್ಗ ಎಂದು ಅದು ಹೇಳಿದೆ.
ಮಮತಾ ಸರ್ಕಾರವೂ ವರದಿ ಸಲ್ಲಿಸಿದೆ ಹೈಕೋರ್ಟ್ ರಚಿಸಿದ ಸಮಿತಿಯ ಹೊರತಾಗಿ, ಪಶ್ಚಿಮ ಬಂಗಾಳ ಸರ್ಕಾರವೂ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ವರದಿಯನ್ನು ಸಲ್ಲಿಸಿದೆ. ಪೊಲೀಸರು ಮತ್ತು ಜಿಲ್ಲಾಡಳಿತದ ಹಸ್ತಕ್ಷೇಪದ ನಂತರ ಸುತಿ, ಧುಲಿಯನ್, ಶಂಶೇರ್ಗಂಜ್ ಮತ್ತು ಜಂಗೀಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅದು ಹೇಳಿದೆ. ವರದಿಗಳ ಪ್ರಕಾರ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಏಪ್ರಿಲ್ 4 ರಿಂದಲೇ ಮುರ್ಷಿದಾಬಾದ್ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಏಪ್ರಿಲ್ 12 ರಂದು, ಶಂಶೇರ್ಗಂಜ್ನಲ್ಲಿ ಹರಗೋಬಿಂದ್ ದಾಸ್ ಮತ್ತು ಅವರ ಮಗ ಚಂದನ್ ದಾಸ್ ಅವರನ್ನು ಗುಂಪೊಂದು ಕೊಂದಿತ್ತು. ಏಪ್ರಿಲ್ 11 ರಂದು ಶಂಶೇರ್ಗಂಜ್ನಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಹೈಕೋರ್ಟ್ ಆದೇಶದ ಮೇರೆಗೆ, ಏಪ್ರಿಲ್ 12 ರಂದು ನಿಯೋಜನೆಯನ್ನು ಹೆಚ್ಚಿಸಲಾಯಿತು ಎಂದು ತಿಳಿಸಲಾಗಿದೆ.








