ಮೈಸೂರು : ಪತ್ನಿ ಕೊಲ್ಲಲು ಹೋಗಿ ಮಾವನನ್ನೇ ಕೊಂದ ಅಳಿಯ!!

ಮೈಸೂರು: 

     ಪತ್ನಿಯನ್ನು ಕೊಲೆ ಮಾಡಲು ಬಂದ ವ್ಯಕ್ತಿ ತನ್ನ ಮಾವನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ.

      ಸಲೀಂ (50) ಅಳಿಯನಿಂದ ಕೊಲೆಯಾದ ಮಾವ. ಅಳಿಯ ನದೀಂ ಅಹಮದ್ ಖಾನ್ ಕೊಲೆ‌ ಮಾಡಿ ತಲೆಮರೆಸಿಕೊಂಡಿದ್ದಾನೆ. 

       ನದೀಂ ತನ್ನ ಪತ್ನಿ ಹಸೀನಾಳ ಶೀಲದ ಮೇಲೆ ಶಂಕಿಸುತ್ತಿದ್ದನು. ಅಲ್ಲದೆ ಇದೇ ವಿಚಾರಕ್ಕಾಗಿ ಆಕೆಯ ಜೊತೆ ಜಗಳ ಕೂಡ ಮಾಡುತ್ತಿದ್ದನು. ಪ್ರತಿ ಬಾರಿ ಜಗಳವಾಡುವಾಗ ಮಾವ ಸಲೀಂ ಅವರ ಜಗಳವನ್ನು ಬಿಡಿಸುತ್ತಿದ್ದನು. ಇಂದು ಮುಂಜಾನೆ ಪತ್ನಿಯನ್ನು ಕೊಲೆ ಮಾಡಲು ನದೀಂ ಯತ್ನಿಸಿದ್ದಾನೆ. ಇದನ್ನು ತಡೆಯಲು ಅಡ್ಡ ಬಂದ ಮಾವನಿಗೆ ನದೀಂ ಚಾಕು ಇರಿದಿದ್ದಾನೆ. 

       ಇದರಿಂದಾಗಿ ಭಾರೀ ರಕ್ತ ಸ್ರಾವ ಉಂಟಾಗಿ ಗಂಭೀರವಾಗಿ ಗಾಯಗೊಂಡ ಸಲೀಂರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಲೀಂ ಮೃತಪಟ್ಟಿದ್ದಾರೆ.

      ಇನ್ನು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link